ತಿರುವನಂತಪುರಂ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಕೆವೈಸಿ ನವೀಕರಣಕ್ಕಾಗಿ ಕೃಷಿ ಅಧಿಕಾರಿಗಳು ಕಡ್ಡಾಯ ಹಣವನ್ನು ಸಂಗ್ರಹಿಸುತ್ತಿದ್ದಾರೆ. ತಿರುವನಂತಪುರಂ ಚೆಂಗಲ್ ಕೃಷಿ ಕಚೇರಿಯು ಬಲವಂತವಾಗಿ ರೈತರಿಂದ 200 ರೂ.ಗಳನ್ನು ವಸೂಲಿ ಮಾಡುತ್ತಿದೆ.
ರೈತರು ತಮ್ಮ KYC ನವೀಕರಿಸಲು ನಾಲ್ಕು ತೆಂಗಿನ ಸಸಿಗಳನ್ನು ಖರೀದಿಸಬೇಕು. ಅಥವಾ ಕೃಷಿ ಅಧಿಕಾರಿಯ ಸಲಹೆಯೆಂದರೆ ಕೇರಳ ಕರ್ಷಕನ್ ಎಂಬ ಪತ್ರಿಕೆಯನ್ನು ಖರೀದಿಸುವುದು. ಕೇರಳ ಕರ್ಷಕನ್ ಕೃಷಿ ಇಲಾಖೆಯ ನಿಯತಕಾಲಿಕೆಯಾಗಿದೆ. ಶುಲ್ಕ ಪಾವತಿಸದವರಿಗೆ KYC ನವೀಕರಿಸಲಾಗುವುದಿಲ್ಲ. "ನಿಮಗೆ ಏನೂ 6,000 ರೂ.ಲಭಿಸುವಾಗ 200 ರೂ. ಏಕೆ ನೀವು ಕೊಡಬಾರದು?" ಎಂಬುದು ನೌಕರರ ಪ್ರಶ್ನೆ.
ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಜಾರಿಗೆ ಬಂದ ನಂತರ ಎಡಪಂಥೀಯರು ಮತ್ತು ಸರ್ಕಾರ ಸುಳ್ಳು ಪ್ರಚಾರವನ್ನು ಬಿಚ್ಚಿಟ್ಟರು. ಸಿಪಿಎಂ ನಾಯಕರು ಭಾಷಣ ಮಾಡಿ, ಯೋಜನೆಯ ಭಾಗವಾಗುವವರ ಕೃಷಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತದೆ ಎಂದು ಹೇಳುತ್ತಿರುವರು. ರಾಜ್ಯ ಸರ್ಕಾರ ಮತ್ತು ಸಿಪಿಎಂ ಈ ಯೋಜನೆಯನ್ನು ಜನರಿಂದ ದೂರವಿಡಲು ಹಲವು ಕಸರತ್ತುಗಳನ್ನು ನಡೆಸಿದ್ದವು. ಇದು ಚೆಂಕಲ್ನಲ್ಲಿ ನಡೆದ ಘಟನೆಯ ಮುಂದುವರಿಕೆಯಾಗಿದೆ. ರಾಜ್ಯದ ವಿವಿಧ ಕೃಷಿ ಕಚೇರಿಗಳಲ್ಲಿ ಈ ಯೋಜನೆಯನ್ನು ಬುಡಮೇಲುಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ.ಆದರೆ ಬಿಜೆಪಿ ಕಾರ್ಯಕರ್ತರು ಇದ್ಯಾವುದನ್ನು ತಮಗೂ ಸಂಬಂಧವಿಲ್ಲದಂತೆ ನೋಟಕರಷ್ಟೆ ಆಗಿರುವುದು ಅಚ್ಚರಿ ಮೂಡಿಸಿದೆ.




