ಕಾಸರಗೋಡು: ರಾಷ್ಟ್ರೀಯ ಕಾರ್ಮಿಕರ ದಿನಚರಣೆ ಅಂಗವಾಗಿ ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಮೇ ದಿನದ ರ್ಯಾಲಿ ಕಾಸರಗೊಡು ನಗರದಲ್ಲಿ ನಡೆಯಿತು. ಕಾಸರಗೋಡು ಕೆಎಸ್ಆರ್ಟಿಸಿ ಡಿಪೆÇೀ ವಠಾರದಿಂದ ಆರಂಭಗೊಂಡ ಕಾರ್ಮಿಕರ ಮೆರವಣಿಗೆ ಕಾಸರಗೋಡು ನಗರದ ವಿವಿಧೆಡೆ ಸಂಚರಿಸಿ ಹೊಸ ಬಸ್ ನಿಲ್ದಾಣ ವಟರದಲ್ಲಿ ಸಮಾರೋಪಗೊಂಡಿತು. ಈ ಸಂದರ್ಭ ನಡೆದ ಸಬೆಯನ್ನು ಉದುಮ ಶಾಸಕ ವಕೀಲ ಸಿ.ಎಚ್.ಕುಞಂಬು ಉದ್ಘಾಟಿಸಿದರು.
ಕಾರ್ಮಿಕ ಸಂಘದ ಮುಖಂಡರಾದ ಟಿ.ಕೃಷ್ಣನ್, ಗಿರಿ ಕೃಷ್ಣನ್, ಟಿಎಂಎ ಕರೀಂ, ಸಿಎಂಎ ಜಲೀಲ್, ಹನೀಫ್ ಕಡಪ್ಪುರಂ, ಕೆ.ರವೀಂದ್ರನ್ ಮೊದಲಾದವರು ಉಪಸ್ಥಿತರಿದ್ದರು. ಮಹಿಳೆಯರ ಸಹಿತ ನೂರರುಮಂದಿ ಮೆರವಣಿಗೆಯಲ್ಲಿಪಾಲ್ಗೊಂಡಿದ್ದರು.





