ಕಾಸರಗೋಡು: ನಕಲಿ ದಾಖಲೆ ಸಲ್ಲಿಸಿ ಕೃಷಿ ಅಭಿವೃದ್ಧಿ ಬ್ಯಾಂಕಿನಿಂದ ಅರ್ಧ ಲಕ್ಷ ರೂ. ದೋಚಿರುವ ಬಗ್ಗೆ ಬ್ಯಾಂಕಿನ ಪ್ರಬಂಧಕ ಮತ್ತು ಕಾರ್ಯದರ್ಶಿ ವಿರುದ್ದ ಚಿತ್ತಾರಿಕಲ್ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಂಬಲ್ಲೂರ್ ಕೊಲ್ಲಡ ನಿವಾಸಿ ಕೆ.ಜೆ ಜೇಮ್ಸ್ ಅವರ ದೂರಿನ ಮೇರೆಗೆ ಈ ಕಏಸು ದಾಖಲಾಗಿದೆ.
2022 ಏ. 13ರಂದು ಘಟನೆ ನಡೆದಿದ್ದು, ದೂರುದಾರ ಕೆ.ಜೆ ಜೇಮ್ಸ್ ಅವರ ನಕಲಿ ಸಹಿ ಬಳಸಿ, ಸಾಲದ ಅರ್ಜಿ ತಯಾರಿಸಿ 50 ಸಾವಿರ ರೂ. ಕಬಳಿಸಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

