ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಭಾರತದ 'ಕುಟುಂಬಕ್ಕೆ' ಸೇರಿದವರು, ಅವರು ತಮ್ಮ ಅಂತರಾತ್ಮದ ಕರೆಗೆ ಓಗೊಟ್ಟು ಭಾರತದ ಮುಖ್ಯವಾಹಿನಿಗೆ ಮರಳುವ ದಿನ ದೂರವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಗುರುವಾರ ಹೇಳಿದ್ದಾರೆ.
ಭಯೋತ್ಪಾದನೆಗೆ ನೀಡುವ ಪ್ರತಿಕ್ರಿಯೆ ಹಾಗೂ ಅದನ್ನು ನಿರ್ವಹಿಸುವ ಕಾರ್ಯತಂತ್ರವನ್ನು ಭಾರತವು ಮರುರೂಪಿಸಿದೆ, ಪಾಕಿಸ್ತಾನದ ಜೊತೆ ಮಾತುಕತೆ ನಡೆಯಬಹುದು ಎಂದಾದರೆ ಅದು ಭಯೋತ್ಪಾದನೆ ಮತ್ತು ಪಿಒಕೆ ಕುರಿತಾಗಿ ಮಾತ್ರ ಎಂದು ಸಿಂಗ್ ಹೇಳಿದ್ದಾರೆ.
'ಸಿಐಐ ವಾಣಿಜ್ಯ ಶೃಂಗ'ದಲ್ಲಿ ಮಾತನಾಡಿದ ಅವರು, 'ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತದಲ್ಲೇ ತಯಾರಿಸಿ ಅಭಿಯಾನವು ದೇಶದ ರಾಷ್ಟ್ರೀಯ ಭದ್ರತೆಯಲ್ಲಿ ಮಹತ್ವದ ಅಂಶ, ಇದು ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಭಯೋತ್ಪಾದನೆಯ ವಿರುದ್ಧ ಭಾರತವು ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ' ಎಂದಿದ್ದಾರೆ.




