HEALTH TIPS

ಎ.ರಾಜಾ ಶಾಸಕರಾಗಿ ಮುಂದುವರಿಯಬಹುದು; ದೇವಿಕುಳಂ ಚುನಾವಣೆ ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ದೇವಿಕುಳಂ ಚುನಾವಣೆಯನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕ್ರಿಶ್ಚಿಯನ್ ದಂಪತಿಗಳಿಗೆ ಜನಿಸಿದ ಶಾಸಕ ಎ. ರಾಜಾ ಅವರು ಪರಿಶಿಷ್ಟ ಜಾತಿ ಮೀಸಲಾತಿಗೆ ಅರ್ಹರು ಮತ್ತು ಹೈಕೋರ್ಟ್‍ನ ತೀರ್ಪಿನಲ್ಲಿ ದೋಷವಿದೆ ಎಂದು ಸುಪ್ರೀಂ ಕೋರ್ಟ್ ಗಮನಸೆಳೆದಿದೆ.

ನ್ಯಾಯಮೂರ್ತಿಗಳಾದ ಅಹ್ಸನುದ್ದೀನ್ ಅಮಾನುಲ್ಲಾ, ಆಗಸ್ಟೀನ್ ಜಾರ್ಜ್ ಮ್ಯಾಸ್ಸಿ ಮತ್ತು ಅಭಯ್ ಶ್ರೀನಿವಾಸ್ ಓಕಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.


ಇದರೊಂದಿಗೆ ರಾಜಾ ಶಾಸಕರಾಗಿ ಮುಂದುವರಿಯಬಹುದು. ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ಇಡುಕ್ಕಿಯ ದೇವಿಕುಳಂ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಆಗಿರುವ ರಾಜಾ ಅವರ ಗೆಲುವನ್ನು ವಿರೋಧಿಸಿದ ಕಾಂಗ್ರೆಸ್‍ನ ವಿರೋಧ ಪಕ್ಷದ ಅಭ್ಯರ್ಥಿ ಡಿ. ಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಸಾಕ್ಷ್ಯಾಧಾರಗಳ ಆಧಾರದ ಮೇಲೆ, ಹೈಕೋರ್ಟ್ ರಾಜಾ ಅವರ ಚುನಾವಣಾ ಗೆಲುವನ್ನು ರದ್ದುಗೊಳಿಸಿತು. ಇದರ ವಿರುದ್ಧ ರಾಜಾ ಸುಪ್ರೀಂ ಕೋರ್ಟ್ ಮೊರೆ ಹೋದರು.

ಇದಕ್ಕೂ ಮೊದಲು, ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ತನ್ನ ತಂದೆ ತಮಿಳುನಾಡಿನಿಂದ ಮುನ್ನಾರ್‍ಗೆ ವಲಸೆ ಬಂದ ಹಿಂದೂ ಪರಯರ್ ಪೆÇೀಷಕರ ಮಗ ಎಂದು ರಾಜಾ ಸುಪ್ರೀಂ ಕೋರ್ಟ್‍ನಲ್ಲಿ ವಾದಿಸಿದರು. 1950 ಕ್ಕಿಂತ ಮೊದಲು ವಲಸೆ ಬಂದ ಕಾರಣ ಕೇರಳದಲ್ಲಿ ಮೀಸಲಾತಿಗೆ ಅರ್ಹರು ಎಂದು ರಾಜಾ ವಾದಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries