HEALTH TIPS

ಪಿಒಕೆ ಮರಳಿ ಪಡೆಯಲು ಯುದ್ಧ ಮಾಡುವುದು ನಮ್ಮ ಹಕ್ಕು: ಮಾಜಿ ಸೇನಾಧಿಕಾರಿ

ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ ನಂತರ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವು, ಹೊಸಕಾಲದ ಯುದ್ಧ ತಂತ್ರಗಳಲ್ಲಿ ಡ್ರೋನ್ ಹಾಗೂ ಸೈಬರ್ ದಾಳಿಗಳು ಭವಿಷ್ಯದ ಯುದ್ಧ ತಂತ್ರಗಳ ಭಾಗ ಎಂಬುದರ ಮುನ್ನುಡಿಯಾಗಿದೆ ಎಂದು ಮಾಜಿ ಲೆಫ್ಟಿನೆಂಟ್ ಜನರಲ್ ಅನಿಲ್ ಕುಮಾರ್ ಭಟ್ ತಿಳಿಸಿದರು.

ಈ ಬಾರಿ, ಭಾರತಕ್ಕೆ ಮೇಲುಗೈ ಸಾಧಿಸುವ ಎಲ್ಲಾ ಅವಕಾಶವಿತ್ತು. ಆದರೆ, ನಾಲ್ಕೇ ದಿನಗಳಲ್ಲಿ ಸಂಧಾನ ಮಾಡಿಕೊಳ್ಳುವ ಮೂಲಕ ಪಾಕ್- ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಅವಕಾಶವನ್ನು ಭಾರತ ತಪ್ಪಿಸಿಕೊಂಡಿತು. ಪಿಒಕೆ ಸಮಸ್ಯೆ ಬಗೆ ಹರಿಯಲು ಯುದ್ಧವೇ ಕೊನೆಯ ಆಯ್ಕೆಯಾಗಿತ್ತು ಎಂದರು.

ಪಿಒಕೆಯನ್ನು ಮರಳಿ ಪಡೆಯುವುದು ನಮ್ಮ ಹಕ್ಕು. ಭಾರತೀಯ ಸೇನೆ ಯಾವಾಗಲೂ ಅದಕ್ಕೆ ಸಿದ್ಧವಾಗಿರುತ್ತದೆ ಎಂದರು.

2017ರಲ್ಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಕುಮಾರ್ ಅವರು ಭಾರತೀಯ ಸೇನೆಯ ಡಿಜಿಎಂಒ ಆಗಿ ಕೂಡ ಕಾರ್ಯನಿರ್ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries