HEALTH TIPS

ಭಾರತ-ಪಾಕ್ ಬಿಕ್ಕಟ್ಟು: ಪರಿಕ್ಕರ್ ದೂರದೃಷ್ಟಿ ನೆನೆದ ಗೋವಾ ಬಿಜೆಪಿ

ಪಣಜಿ: ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಸ್ಥಿತಿ ಮುಂದುವರಿದಿರುವಂತೆಯೇ, ಗೋವಾ ಬಿಜೆಪಿ ಸದಸ್ಯರು ರಕ್ಷಣಾ ಸಚಿವರಾಗಿದ್ದ ದಿ. ಮನೋಹರ್ ಪರಿಕ್ಕರ್ ಅವರ ದೂರದೃಷ್ಟಿಯನ್ನು ಕೊಂಡಾಡಿದ್ದಾರೆ. 

ದಿ.ಮನೋಹರ್ ಪರಿಕ್ಕರ್ ಅವರು ರಕ್ಷಣಾ ಸಚಿವರಾಗಿದ್ದಾಗ ಭಾರತದ ರಕ್ಷಣಾ ವಲಯಕ್ಕೆ ಶಕ್ತಿ ತುಂಬಿದರು.

ಆದರೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ದೇಶದ ಭದ್ರತಾ ವ್ಯವಸ್ಥೆಯನ್ನು ಕಡೆಗಣಿಸಿತ್ತು ಎಂದು ಗೋವಾದ ಬಿಜೆಪಿ ಘಟಕ ಶನಿವಾರ ಆರೋಪಿಸಿದೆ.

'ಭಾರತದ ಪ್ರಬಲ ರಕ್ಷಣಾ ಮಂತ್ರಿಗಳಲ್ಲಿ ಒಬ್ಬರಾಗಿದ್ದ ಪರಿಕ್ಕರ್, ರಕ್ಷಣಾ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ್ದರು. ಪರಿಕ್ಕರ್ ಅವರು ರಕ್ಷಣಾ ಸಚಿವರಾಗಿದ್ದಾಗ ರಫೇಲ್ ಯುದ್ಧ ವಿಮಾನಗಳು, ಸೇನಾ ಯೋಧರಿಗೆ ಗುಂಡು ನಿರೋಧಕ ಜಾಕೆಟ್‌ಗಳು, ಹೆಲ್ಮೆಟ್ ಸೇರಿದಂತೆ ಇನ್ನಿತರ ಪ್ರಮುಖ ಪರಿಕರಗಳನ್ನು ಖರೀದಿಸಲಾಗಿತ್ತು. ಹೀಗಾಗಿ, ಮನೋಹರ್ ಪರಿಕ್ಕರ್ ಅವರಿಗೆ ಸೆಲ್ಯೂಟ್ ಮಾಡಲೇಬೇಕು' ಎಂದು ಗೋವಾದ ಬಿಜೆಪಿ ಘಟಕದ ಅಧ್ಯಕ್ಷ ದಾಮೋದರ್ ನಾಯ್ಕ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries