HEALTH TIPS

ವೆಂಜರಮೂಡು ಹತ್ಯಾಕಾಂಡ ಪ್ರಕರಣದ ಆರೋಪಿಯ ಆತ್ಮಹತ್ಯೆಗೆ ಯತ್ನದಲ್ಲಿ ಜೈಲು ಅಧಿಕಾರಿಗಳ ತಪ್ಪಿಲ್ಲ: ವರದಿ

ತಿರುವನಂತಪುರಂ: ವೆಂಜರಮೂಡು ಹತ್ಯಾಕಾಂಡ ಪ್ರಕರಣದ ಆರೋಪಿ ಅಫಾನ್ (23) ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಜೈಲು ಅಧಿಕಾರಿಗಳ ಯಾವುದೇ ಲೋಪವಾಗಿಲ್ಲ ಎಂದು ವರದಿಯಾಗಿದೆ.

ಜೈಲು ಅಧೀಕ್ಷಕರು ವರದಿಯನ್ನು ಜೈಲು ಮುಖ್ಯಸ್ಥರಿಗೆ ಸಲ್ಲಿಸಿರುವರು. ಅಧಿಕಾರಿಗಳ ಸಕಾಲಿಕ ಹಸ್ತಕ್ಷೇಪವೇ ಜೀವಗಳನ್ನು ಉಳಿಸಲು ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.


ಪೂಜಾಪುರ ಜೈಲಿನ ಯುಟಿಬಿ ಬ್ಲಾಕ್‍ನ ಸ್ನಾನಗೃಹದಲ್ಲಿ ಅಫಾನ್ ಆತ್ಮಹತ್ಯೆಗೆ ಯತ್ನಿಸಿದ್ದ.  ವೈದ್ಯಕೀಯ ಕಾಲೇಜಿಗೆ ದಾಖಲಾಗಿರುವ ಅಫಾನ್ ಸ್ಥಿತಿ ಇನ್ನೂ ಗಂಭೀರವಾಗಿದೆ. ಆತ  ವೆಂಟಿಲೇಟರ್‍ನಲ್ಲಿದ್ದಾನೆ.

ಭಾನುವಾರ ಬೆಳಿಗ್ಗೆ 11.30 ರ ಸುಮಾರಿಗೆ ಅಫಾನ್ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ತಕ್ಷಣ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತನ ಜೊತೆಗಿದ್ದ ಕೈದಿ ಪೋನ್ ಮಾಡಲು ತೆರಳಿದ್ದಾಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜೈಲಿನಲ್ಲಿ ವಾರಕ್ಕೊಮ್ಮೆ ಕೈದಿಗಳಿಗೆ ಟಿವಿ ನೋಡಲು ಸಮಯ ನೀಡುವ ಸಂಪ್ರದಾಯವಿದೆ. ಈ ಸಮಯದಲ್ಲಿ, ಅವನು ಸ್ನಾನಗೃಹಕ್ಕೆ ಪ್ರವೇಶಿಸಿ ಹೊರಗೆ ಒಣಗಲು ಬಿಟ್ಟಿದ್ದ ಟವಲ್ ಬಳಸಿ ಆತ್ಮಹತ್ಯೆಗೆ ಯತ್ನಿಸಿದನು.

ತನ್ನ ಸಹೋದರ ಮತ್ತು ಗೆಳತಿ ಸೇರಿದಂತೆ 5 ಜನರ ಸಾಮೂಹಿಕ ಹತ್ಯೆಯ ಪ್ರಕರಣದ ಆರೋಪಿ ಅಫಾನ್ ಪ್ರಸ್ತುತ ಪೂಜಾಪುರ ಜೈಲಿನಲ್ಲಿ ವಿಚಾರಣಾ ಪೂರ್ವ ಕೈದಿಯನಾಗಿದ್ದಾನೆ. ಅಫ್ಫಾನ್ ತನ್ನ ಸಹೋದರ ಅಹ್ಸಾನ್, ಗೆಳತಿ ಫರ್ಜಾನಾ, ಚಿಕ್ಕಪ್ಪ ಲತೀಫ್, ಅವರ ಪತ್ನಿ ಸಾಜಿದಾ ಮತ್ತು ಚಿಕ್ಕಮ್ಮ ಸಲ್ಮಾ ಬೀವಿಯನ್ನು ಅಮಾನುಷವಾಗಿ ಕೊಲೆಗೈದಿದ್ದ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries