HEALTH TIPS

ಆಪರೇಷನ್‌ ಸಿಂಧೂರದ ಬಗ್ಗೆ ಅವಹೇಳನಕಾರಿ ಪೋಸ್ಟ್‌; ಇನ್‌ಫ್ಲುಯೆನ್ಸರ್‌ ಬಂಧನ

ಗುರುಗ್ರಾಮ: ಆಪರೇಷನ್‌ ಸಿಂಧೂರದ ಬಗ್ಗೆ ಬಾಲಿವುಡ್‌ ನಟರು ಮೌನವಾಗಿದ್ದಾರೆ ಎಂದು ಹೇಳುವ ಕೋಮುವಾದಿ ಹೇಳಿಕೆಗಳ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಆರೋಪದಡಿ ಇನ್‌ಫ್ಲುಯೆನ್ಸರ್‌ರೊಬ್ಬರನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ. 

ಪುಣೆಯ ಕಾನೂನು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಶರ್ಮಿಷ್ಠ ಪನೋಲಿಯನ್ನು ಪೊಲೀಸರು ಗುರುಗ್ರಾಮದಲ್ಲಿ ಬಂಧಿಸಿದ್ದಾರೆ.

ಆಪರೇಷನ್ ಸಿಂಧೂರದ ಬಗ್ಗೆ ಬಾಲಿವುಡ್‌ ನಟರು ಮೌನವಾಗಿದ್ದಾರೆ ಎಂದು ಆರೋಪಿಸಿ ಕೋಮುವಾದಿ ಹೇಳಿಕೆಗಳ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ವಿಡಿಯೊವನ್ನು ಅಳಿಸಿ ಹಾಕಿ, ಆಕೆ ಕ್ಷಮೆಯಾಚಿಸಿದ್ದರು ಎಂದು ತಿಳಿದು ಬಂದಿದೆ.

ಆದರೆ ಅಷ್ಟರ ವೇಳೆಗೆ ಆಕೆಯ ವಿರುದ್ಧ ಕೋಲ್ಕತ್ತದಲ್ಲಿ ಪ್ರಕರಣ ದಾಖಲಾಗಿತ್ತು. ಆಕೆ ಹಾಗೂ ಆಕೆಯ ಕುಟುಂಬಕ್ಕೆ ನೋಟಿಸ್‌ ಬಂದಿದ್ದವು. ನೋಟಿಸ್‌ಗೆ ಉತ್ತರಿಸದೆ, ಕುಟುಂಬದ ಜತೆ ಪರಾರಿಯಾಗಿದ್ದ ಶರ್ಮಿಷ್ಠರ ಬಂಧನಕ್ಕೆ ನ್ಯಾಯಾಲಯ ಬಂಧನದ ವಾರೆಂಟ್‌ ಹೊರಡಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries