HEALTH TIPS

ಕಾಸರಗೋಡಿನಲ್ಲಿ ಭಜನಾ ಪರಿಷತ್ ಏಕದಿನ ಭಜನಾ ಕಮ್ಮಟಕ್ಕೆ ನಿರ್ಧಾರ

ಕಾಸರಗೋಡು : ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕು ವಿಶೇಷ ಸಭೆ ಭಾನುವಾರ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜರಗಿತು.

ಭಜನಾ ಪರಿಷತ್ ಕಾಸರಗೋಡು ವಲಯ ಅಧ್ಯಕ್ಷ ಡಾ. ಎನ್ ವೆಂಕಟ್ರಮಣ ಹೊಳ್ಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಜನಾ ಪರಿಷತ್ ಜಿಲ್ಲಾ ಸಮನ್ವಯ ಅಧಿಕಾರಿ ಸಂತೋಷ್ ಅಳಿಯೂರು ಮಾತನಾಡಿ, ಕಾಸರಗೋಡು ತಾಲೂಕುಗಳಲ್ಲಿ ವಿವಿಧ ವಲಯಗಳಾಗಿ ವಿಂಗಡಿಸಿ ಅದರಲ್ಲಿ ಈ ಭಜನಾ ಪರಿಷತ್  ಕಾಸರಗೋಡಿನಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುವ ಭಜನಾ ಕಮ್ಮಟಕ್ಕೆ ನಾಡಿನ ಎಲ್ಲಾ ಭಜನಾ ಸಂಘಗಳು, ಭಜನಾ ಪರಿಷತ್ ನ ಎಲ್ಲಾ ಸದಸ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಪೂರ್ಣ ಸಹಕಾರನೀಡ ಬೇಕೆಂದು ವಿನಂತಿಸಿದರು. 


ಭಜನಾ ಪರಿಷತ್ ಗೌರವಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ ಅವರು ಜೂ. 01 ರಂದು ಕಾಸರಗೋಡಿನಲ್ಲಿ ಒಂದು ದಿವಸದ ಭಜನಾ ಕಮ್ಮಟ ಕಾರ್ಯಕ್ರಮವನ್ನು ನಡೆಸುವುದಾಗಿ ಸಮಗ್ರ ಮಾಹಿತಿ ನೀಡಿದರು.

ಸಭೆಯಲ್ಲಿ ಮಂಜೇಶ್ವರ ವಲಯ ಭಜನಾ ಪರಿಷತ್ ಅಧ್ಯಕ್ಷ  ದಿನೇಶ್ ಚೆರುಗೋಳಿ, ವಿವಿಧ ಭಜನಾ ಸಂಘದ ಸದಸ್ಯರು ಹಾಗೂ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು. ರೋಹಿತ್ ಮಧೂರು ಕಾರ್ಯಕ್ರಮ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries