HEALTH TIPS

ಪ್ರಧಾನಿ ತೆರಳುವ ರಾಜ ಭವನ ಬೀದಿಯಲ್ಲಿ ಬೆಳಗದ ದೀಪ: ಭದ್ರತಾ ಲೋಪ ಆರೋಪ: ಬಿಜೆಪಿ ಕೌನ್ಸಿಲರ್‍ಗಳ ಪ್ರತಿಭಟನೆ

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ವಿಳಿಂಜಂ ಬಂದರು ಉದ್ಘಾಟನೆಗೆ ಆಗಮಿಸಿದ ಬೆನ್ನಲ್ಲೇ ಬಿಜೆಪಿ ಕೌನ್ಸಿಲರ್‍ಗಳು ಪ್ರತಿಭಟನೆ ನಡೆಸಿದರು. ಪ್ರಧಾನಿ ರಾಜಭವನಕ್ಕೆ ತೆರಳುವ ಮಾರ್ಗದಲ್ಲಿ ಸಂಚಾರ ದೀಪಗಳು ಬೆಳಗುತ್ತಿಲ್ಲ ಎಂದು ಪ್ರತಿಭಟನೆಯಲ್ಲಿ ಆರೋಪಿಸಲಾಗಿತ್ತು.

ಬೀದಿ ದೀಪಗಳನ್ನು ಬೆಳಗಿಸದಿರುವುದು ಸುರಕ್ಷತಾ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಪ್ರಧಾನಿ ನಿವಾಸವಿರುವ ರಾಜಭವನದ ಬಳಿ ಪ್ರತಿಭಟನೆ ನಡೆದಿತ್ತು. ರಾಜಭವನಕ್ಕೆ ಆಗಮಿಸಿರುವ ಪ್ರಧಾನಿ, ರಾತ್ರಿ ರಾಜ್ಯಪಾಲರೊಂದಿಗೆ ಭೋಜನ ಕೂಟದಲ್ಲಿ ಭಾಗವಹಿಸಿದರು. 

ಇಂದು ಬೆಳಿಗ್ಗೆ 10.15 ಕ್ಕೆ ಪ್ರಧಾನಿಯವರ ಹೆಲಿಕಾಪ್ಟರ್ ಮೂಲಕ ಆಗಮಿಸಿ ಬಂದರನ್ನು ರಾಷ್ಟ್ರಕ್ಕೆ ಸಮರ್ಪಿಸಿದ ನಂತರ, ಮಧ್ಯಾಹ್ನ 12.30 ಕ್ಕೆ ತಿರುವನಂತಪುರಂಗೆ ಹಿಂತಿರುಗಲಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries