HEALTH TIPS

ವಿಪತ್ತು ಸ್ಥಿತಿಸ್ಥಾಪಕತ್ವ: ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಅಮೃತ ವಿಶ್ವವಿದ್ಯಾಲಯ ಒಪ್ಪಂದಕ್ಕೆ ಸಹಿ

ಕರುನಾಗಪ್ಪಳ್ಳಿ: ಅಮೃತ ವಿಶ್ವವಿದ್ಯಾಪಥಂ ಮತ್ತು ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್.ಎಸ್.ಡಿ.ಎಂ.) ಪೂರ್ವ ಹಿಮಾಲಯದಲ್ಲಿ ಸಮುದಾಯದ ಸ್ಥಿತಿಸ್ಥಾಪಕತ್ವ ಮತ್ತು ವಿಪತ್ತು ಸಿದ್ಧತೆಯನ್ನು ಬಲಪಡಿಸಲು ತಿಳುವಳಿಕೆ ಒಪ್ಪಂದಕ್ಕೆ (ಎಂ.ಒ.ಯು.) ಸಹಿ ಹಾಕಿವೆ.

ಎಸ್‍ಎಸ್‍ಡಿಎಂಎ ಪರಿಹಾರ ಆಯುಕ್ತ-ಕಾರ್ಯದರ್ಶಿ ಎಂ.ಟಿ. ಶೆರ್ಪಾ ಅವರ ಸಮ್ಮುಖದಲ್ಲಿ, ಎಸ್.ಎಸ್.ಡಿ.ಎಂ. ನಿರ್ದೇಶಕ ಪ್ರಭಾಕರ್ ರೈ, ಅಮೃತ ಡಬ್ಲ್ಯು.ಎನ್.ಯು. ನಿರ್ದೇಶಕಿ ಪ್ರೊಪೋಸ್ಟ್ ಡಾ. ಮನಿಷಾ ವಿನೋದಿನಿ ಮತ್ತು ರಮೇಶ್ ಈ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಹಯೋಗವು ಅತ್ಯಂತ ಪರಿಸರ ದುರ್ಬಲ ಪ್ರದೇಶಗಳಲ್ಲಿ ಒಂದಾದ ಸಿಕ್ಕಿಂನಲ್ಲಿ ಭೂಕುಸಿತ ಮತ್ತು ಹಿಮಪಾತದಂತಹ ವಿಪತ್ತುಗಳ ಅಪಾಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಜೊತೆಗೆ ಸುಸ್ಥಿರ ಸಮುದಾಯ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಈ ಪಾಲುದಾರಿಕೆಯನ್ನು ಅಮೃತ ಸ್ಕೂಲ್ ಫಾರ್ ಸಸ್ಟೈನಬಲ್ ಫ್ಯೂಚರ್ಸ್, ಅಮೃತ ಸೆಂಟರ್ ಫಾರ್ ವೈರ್‍ಲೆಸ್ ನೆಟ್‍ವಕ್ರ್ಸ್ ಅಂಡ್ ಅಪ್ಲಿಕೇಷನ್ಸ್ (ಅಮೃತ ಡಬ್ಲ್ಯೂಎನ್‍ಎ) ಮತ್ತು ಯುನೆಸ್ಕೋ ಚೇರ್ ಆನ್ ಎಕ್ಸ್‍ಪೀರಿಯೆನ್ಷಿಯಲ್ ಲರ್ನಿಂಗ್ ಫಾರ್ ಸಸ್ಟೈನಬಲ್ ಇನ್ನೋವೇಶನ್ ಅಂಡ್ ಡೆವಲಪ್‍ಮೆಂಟ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ.

ಗ್ಯಾಂಗ್ಟಾಕ್‍ನಲ್ಲಿ ನಡೆದ ಸಮಾರಂಭದಲ್ಲಿ, ಎಸ್ ಎಸ್‍ಡಿಎಂಎ ಪರಿಹಾರ ಆಯುಕ್ತ-ಕಾರ್ಯದರ್ಶಿ ಎಂ.ಟಿ. ಶೆರ್ಪಾ, ಹೆಚ್ಚುವರಿ ನಿರ್ದೇಶಕ ರಾಜೀವ್ ರಾಕ್, ತರಬೇತಿ ಅಧಿಕಾರಿ ಕೇಶವ್ ಕೊಯಿರಾಲ ಮತ್ತಿತರರು ಉಪಸ್ಥಿತರಿದ್ದರು. ಅಮೃತಾ ಪ್ರತಿನಿಧಿಸಿದವರು ಲಿವ್-ಇನ್-ಲ್ಯಾಬ್ಸ್‍ನ ಕಾರ್ಯಕ್ರಮ ವ್ಯವಸ್ಥಾಪಕ ರಂಜಿತ್ ಮೋಹನ್ ಮತ್ತು Wಡಬ್ಲ್ಯು.ಎನ್.ಎ. ನಲ್ಲಿ ಯೋಜನಾ ವ್ಯವಸ್ಥಾಪಕ ಎಂ. ನಿತಿನ್, ಸಂಶೋಧನಾ ಸಹವರ್ತಿಗಳಾದ ಅಮೃತೇಶ್, ಹರಿಚಂದನ, ಮತ್ತು ಎ.ಎಸ್. ರೇಷ್ಮಾ, ಫೀಲ್ಡ್ ಅಸೋಸಿಯೇಟ್ ಬಿಚು ಭಾಗವಹಿಸಿದ್ದರು.

ಒಪ್ಪಂದದ ಭಾಗವಾಗಿ, ದೊಡ್ಡ ಪ್ರಮಾಣದ ಸಾಮಥ್ರ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಜನಸಂಪರ್ಕ ಜಾಗೃತಿ ಅಭಿಯಾನಗಳು ಮತ್ತು ವಿವಿಧ ತಡೆಗಟ್ಟುವ ಉಪಕ್ರಮಗಳನ್ನು ಜಾರಿಗೆ ತರಲಾಗುವುದು. ವಿಶ್ವವಿದ್ಯಾನಿಲಯವು ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳು, ಬಹುಭಾಷಾ ಕಲಿಕಾ ಪರಿಕರಗಳು ಮತ್ತು ವೈರ್‍ಲೆಸ್ ಸೆನ್ಸರ್ ನೆಟ್‍ವರ್ಕ್‍ಗಳನ್ನು ಬಳಸಿಕೊಂಡು ಮುಂಚಿನ ಎಚ್ಚರಿಕೆ ವ್ಯವಸ್ಥೆಗಳು ಮತ್ತು ನೈಜ-ಸಮಯದ ಸಂವಹನ ವ್ಯವಸ್ಥೆಗಳನ್ನು ನಿಯೋಜಿಸುತ್ತದೆ. ಅಮೃತಾ 2013 ರಿಂದ ಗ್ಯಾಂಗ್ಟಾಕ್‍ನ ಚಾಂದ್‍ಮರಿಯಲ್ಲಿ ಭೂಕುಸಿತದ ಮುನ್ನೆಚ್ಚರಿಕೆ ವ್ಯವಸ್ಥೆಗಳ ಮೇಲೆ ಕೆಲಸ ಮಾಡುತ್ತಿದೆ. ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ, ಎಸ್.ಎಸ್.ಡಿ.ಎಂ. ಜೊತೆಗಿನ ತಾಂತ್ರಿಕ ಸಹಕಾರವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಡಾ. ಮನಿಷಾ ವಿ. ರಮೇಶ್ ಹೇಳಿದರು.

ಎಸ್.ಎಸ್.ಡಿ.ಎಂ. ನಿರ್ದೇಶಕ ಪ್ರಭಾಕರ್ ರೈ ಮಾತನಾಡಿ, ವರ್ಷಗಳಿಂದ ಗಂಭೀರ ಅಪಾಯವನ್ನುಂಟುಮಾಡುತ್ತಿರುವ ಚಾಂದ್‍ಮರಿ ಭೂಕುಸಿತದ ಮೇಲ್ವಿಚಾರಣೆಯಲ್ಲಿ ಅಮೃತಾದ ಸೇವೆ ಅತ್ಯಂತ ಶ್ಲಾಘನೀಯ ಮತ್ತು ಹತ್ತು ಪ್ರಮುಖ ಸ್ಥಳಗಳಲ್ಲಿ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಸ್ಥಾಪಿಸುವ ಮೂಲಕ ಮತ್ತು ನಿರ್ಣಾಯಕ ಡೇಟಾವನ್ನು ಸಂಗ್ರಹಿಸುವ ಮೂಲಕ ಅಮೃತಾದ ಸೇವೆಯು ಎಸ್.ಎಸ್.ಡಿ.ಎಂ.ನ ಧ್ಯೇಯವನ್ನು ಹೆಚ್ಚು ಬಲಪಡಿಸಿದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries