HEALTH TIPS

ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಇಲ್ಲದ ಅಪಾರ್ಟ್‍ಮೆಂಟ್‍ಗಳಿಗೆ ದಂಡ

ಕಾಸರಗೋಡು: ಆಹಾರ ತ್ಯಾಜ್ಯ ಸೇರಿದಂತೆ ಸಾವಯವ ತ್ಯಾಜ್ಯವನ್ನು ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಹೊಂದಿರದ ಅಪಾರ್ಟ್‍ಮೆಂಟ್‍ಗಳು ಮತ್ತು ಕಾಂಡೋಮಿನಿಯಂಗಳಿಗೆ ಜಿಲ್ಲಾ ಜಾರಿ ದಳ ದಂಡ ವಿಧಿಸಿದೆ.

ಮಂಜೇಶ್ವರದ ಅಪಾರ್ಟ್‍ಮೆಂಟ್‍ಗಳ ಮಾಲೀಕರಿಗೆ ಜೈವಿಕ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಯನ್ನು ಅಳವಡಿಸದಿದ್ದಕ್ಕಾಗಿ ಮತ್ತು ಅಜೈವಿಕ ತ್ಯಾಜ್ಯವನ್ನು ನಿರ್ಲಕ್ಷ್ಯದಿಂದ ನಿರ್ವಹಿಸಿದ್ದಕ್ಕಾಗಿ ತಲಾ 10,000 ರೂ. ದಂಡ ವಿಧಿಸಲಾಯಿತು ಮತ್ತು ರಿಂಗ್ ಕಾಂಪೋಸ್ಟರ್‍ಗಳನ್ನು ಸ್ಥಾಪಿಸಲು ಸೂಚಿಸಲಾಯಿತು. ಅಪಾರ್ಟ್‍ಮೆಂಟ್‍ಗಳು ಹೆಚ್ಚಿರುವ ಪ್ರದೇಶಗಳ ಬಳಿ ರಸ್ತೆಬದಿಯಲ್ಲಿ ಕಸವನ್ನು ಸುರಿಯುವುದು ಹೆಚ್ಚಾಗಿ ಕಂಡುಬರುತ್ತದೆ. ಕರಿಂವಳಪ್ಪುವಿನಲ್ಲಿರುವ ಕ್ವಾರ್ಟರ್ಸ್‍ನ ಮಾಲೀಕರಿಗೂ ದಂಡ ವಿಧಿಸಲಾಗಿದೆ. ತ್ಯಾಜ್ಯವನ್ನು ಅಜಾಗರೂಕತೆಯಿಂದ ನಿರ್ವಹಿಸಿದ್ದಕ್ಕಾಗಿ 3,000 ರೂ. ದಂಡ ವಿಧಿಸಲಾಗಿದೆ.

ಚೆಂಗಳ ಪಂಚಾಯತ್‍ನ ಚರ್ಲಡ್ಕದಲ್ಲಿರುವ ಅಪಾರ್ಟ್‍ಮೆಂಟ್‍ಗಳ ಮಾಲೀಕರಿಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಇಲ್ಲದ ಕಾರಣ ದಂಡ ವಿಧಿಸಲಾಗಿದೆ. ನೆಲ್ಲಿಕಟ್ಟೆ ಸಂಕೀರ್ಣದೊಳಗಿನ ರೆಸ್ಟೋರೆಂಟ್‍ನಿಂದ ಕೊಳಚೆ ನೀರನ್ನು ಬಯಲಿಗೆ ಬಿಟ್ಟಿದ್ದಕ್ಕಾಗಿ 7,500 ರೂ. ದಂಡ ವಿಧಿಸಲಾಯಿತು ಮತ್ತು ಸೋಕ್ ಪಿಟ್ ಅಳವಡಿಸಿ ವೈಜ್ಞಾನಿಕವಾಗಿ ಸಂಸ್ಕರಿಸಲು ಸೂಚನೆಗಳನ್ನು ನೀಡಲಾಯಿತು. ಜಿಲ್ಲಾ ಜಾರಿ ದಳದ ನಾಯಕ ಕೆ.ವಿ. ಮೊಹಮ್ಮದ್ ಮದನಿ ನೇತೃತ್ವದ ತಪಾಸಣಾ ತಂಡವು, ಪೋಲೀಸ್ ಠಾಣೆಯ ಸಿಬ್ಬಂದಿಗಳಾದ  ಮೊಹಮ್ಮದ್ ಮದನಿ, ಆರೋಗ್ಯ ನಿರೀಕ್ಷಕಿ ರಶ್ಮಿ, ತಂಡದ ಸದಸ್ಯರಾದ ಇ.ಕೆ. ಫಾಸಿಲ್ ಮತ್ತು ಎನ್. ಆದರ್ಶ್ ತಪಾಸಣಾ ತಮಡದಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries