HEALTH TIPS

ಟೆಕ್ನೋಪಾರ್ಕ್‍ನ ಪ್ರತಿಧ್ವನಿಯಿಂದ ವಯನಾಡ್ ಟೌನ್‍ಶಿಪ್‍ಗೆ 28.66 ಲಕ್ಷ ರೂ. ದೇಣಿಗೆ

ತಿರುವನಂತಪುರಂ: ಟೆಕ್ನೋಪಾರ್ಕ್‍ನ ಐಟಿ ಉದ್ಯೋಗಿಗಳ ಕಲ್ಯಾಣ ಸಂಸ್ಥೆಯಾದ ಪ್ರತಿಧ್ವನಿ, ವಯನಾಡ್‍ನ ಚೂರಲ್‍ಮಲಾ ಮತ್ತು ಮುಂಡಕೈನಲ್ಲಿ ಸಂಭವಿಸಿದ ಭೂಕುಸಿತಗಳ ಪುನರ್ವಸತಿ ಕಾರ್ಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (ಸಿಎಂಡಿಆರ್‍ಎಫ್) 28,66,918 ರೂ. ದೇಣಿಗೆ ನೀಡಿದೆ.

ಪ್ರತಿಧ್ವನಿ ರಾಜ್ಯ ಸಂಚಾಲಕ ರಾಜೀವ್ ಕೃಷ್ಣನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಮ್ಮ ಕಚೇರಿಯಲ್ಲಿ ಪರಿಹಾರ ನಿಧಿಯನ್ನು ಹಸ್ತಾಂತರಿಸಿದರು. ಸ್ಥಳೀಯಾಡಳಿತ  ಮತ್ತು ಅಬಕಾರಿ ಸಚಿವ ಎಂ.ಬಿ. ರಾಜೇಶ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಒ.ಆರ್. ಕೇಳು, ಕಂದಾಯ ಮತ್ತು ವಸತಿ ಸಚಿವ ಕೆ. ರಾಜನ್, ವಿದ್ಯುತ್ ಸಚಿವ ಕೆ. ಕೃಷ್ಣನ್‍ಕುಟ್ಟಿ, ಮುಖ್ಯ ಕಾರ್ಯದರ್ಶಿ ಡಾ. ಎ. ಜಯತಿಲಕ್, ವಯನಾಡ್ ಟೌನ್‍ಶಿಪ್ ಯೋಜನೆಯ ವಿಶೇಷ ಅಧಿಕಾರಿ ಎಸ್. ಸುಹಾಸ್ ಮತ್ತು ಸ್ಥಳೀಯಾಡಳಿತ  ಇಲಾಖೆಯ ವಿಶೇಷ ಕಾರ್ಯದರ್ಶಿ ಅನುಪಮಾ ಟಿ.ವಿ ಉಪಸ್ಥಿತರಿದ್ದರು.

ವಯನಾಡ್ ಟೌನ್‍ಶಿಪ್‍ಗಾಗಿ ಪ್ರತಿಧ್ವನಿಯ ಪರಿಹಾರ ನಿಧಿಗೆ ಕೇರಳದ 1156 ಐಟಿ ಉದ್ಯೋಗಿಗಳು ಕೊಡುಗೆ ನೀಡಿದ್ದಾರೆ. ತಿರುವನಂತಪುರಂ ಟೆಕ್ನೋಪಾರ್ಕ್, ಕೊಚ್ಚಿ ಇನ್ಫೋಪಾರ್ಕ್ ಮತ್ತು ಕೋಝಿಕೋಡ್ ಸೈಬರ್‍ಪಾರ್ಕ್‍ನ ಪ್ರತಿಧ್ವನಿ ಘಟಕಗಳ ನೇತೃತ್ವದಲ್ಲಿ ಈ ನಿಧಿಯನ್ನು ಸಂಗ್ರಹಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries