HEALTH TIPS

ಮಾವೇಲಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಮತ್ತು ಹೊಗೆ: ಸುರಕ್ಷತೆ ಖಚಿತಪಡಿಸಿದ ಬಳಿಕ ಮುಂದುವರಿದ ಪ್ರಯಾಣ

ಆಲಪ್ಪುಳ: ಮಾವೇಲಿ ಎಕ್ಸ್ ಪ್ರೆಸ್  ರೈಲಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡ ನಂತರ ಭಾನುವಾರ ಬೆಳಿಗ್ಗೆ ಸುಮಾರು ಎರಡು ಗಂಟೆಗಳ ಕಾಲ ಚೇರ್ತಲಾ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಜ್ಞರು ಬಂದ ನಂತರವೇ ರೈಲು ತನ್ನ ಪ್ರಯಾಣವನ್ನು ಮುಂದುವರಿಸಿತು.

ಶನಿವಾರ ರಾತ್ರಿ ತಿರುವನಂತಪುರಂನಿಂದ ಮಂಗಳೂರಿಗೆ ಹೊರಟ ರೈಲು ಭಾನುವಾರ ಮಧ್ಯರಾತ್ರಿ 12.30 ಕ್ಕೆ ಚೇರ್ತಲಾ ನಿಲ್ದಾಣ ತಲುಪಿದಾಗ ಬೆಂಕಿಗೆ ಸಿಲುಕಿತು. ಬೆಂಕಿ ಮತ್ತು ಹೊಗೆಯನ್ನು ರೈಲ್ವೆ ಅಧಿಕಾರಿಗಳು ಗಮನಿಸಿದರು. ಎರಡು ಬೋಗಿಗಳ ಜಂಕ್ಷನ್‍ನಲ್ಲಿ ಅಸಾಮಾನ್ಯ ಶಬ್ದ ಕೇಳಿದ ನಂತರ ನೌಕರರು ಗಮನ ಹರಿಸಿದರು. 

ರೈಲು ಚೆರ್ತಲಾ ನಿಲ್ದಾಣದಲ್ಲಿ ನಿಂತ ಬಳಿಕ ನೌಕರರು ಮತ್ತು ಪೋಲೀಸರು ಬೆಂಕಿಯನ್ನು ನಂದಿಸಿದರು. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಲಪ್ಪುಳದಿಂದ ತಜ್ಞರು ಬಂದು ಪರಿಶೀಲನೆ ಮನಡೆಸಿದ ನಂತರ ಪ್ರಯಾಣ ಎರಡು ಗಂಟೆಗಳ ಕಾಲ ತಡವಾಗಿ ಮುಂದುವರೆಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries