HEALTH TIPS

ಟ್ರಾಫಿಕ್ ಜಾಮ್ ನಿಂದ ಆಂಬ್ಯುಲೆನ್ಸ್ ವಿಳಂಬ; ಕೊಟ್ಟಿಯೂರಿನಲ್ಲಿ ಚಿಕಿತ್ಸೆ ವಿಳಂಬವಾಗಿ ಮಗು ಸಾವು

ಕಣ್ಣೂರು: ವೈಶಾಖ ಹಬ್ಬ ಪ್ರಾರಂಭವಾದಾಗಿನಿಂದ ಭಾರೀ ಟ್ರಾಫಿಕ್ ಜಾಮ್ ಅನುಭವಿಸುತ್ತಿರುವ ಕೊಟ್ಟಿಯೂರಿನಲ್ಲಿ ಒಂದು ಮಗು ಸಾವನ್ನಪ್ಪಿದೆ.

ಟ್ರಾಫಿಕ್ ಜಾಮ್ ನಿಂದ ಆಂಬ್ಯುಲೆನ್ಸ್ ವಿಳಂಬವಾಗಿದ್ದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.

ಕೊಟ್ಟಿಯೂರಿನ ಅಂಬಯತ್ತೊಟ್ಟಿನ ಮೂರುವರೆ ವರ್ಷದ ಪ್ರಜುಲಾ ದುರದೃಷ್ಟಕರ ಘಟನೆಯಲ್ಲಿ ಸಾವನ್ನಪ್ಪಿದ ಬಾಲಕಿ. ಮೃತ ಪ್ರಜುಲಾ ಪಾಲ್ಚುರಾಮ್ ಕಾಲೋನಿಯ ಪ್ರದೋಷ- ಬಿಂದು ದಂಪತಿಗಳ ಪುತ್ರಿ.  ಜ್ವರದಿಂದಾಗಿ 108 ಆಂಬ್ಯುಲೆನ್ಸ್‍ಗೆ ಕರೆ ಮಾಡಲಾಗಿತ್ತು, ಆದರೆ ಅವರು ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿಕೊಂಡರು. ಮಾನಂದವಾಡಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಮಗು ಸಾವನ್ನಪ್ಪಿತು.

ಪೋಲೀಸರು ಸಂಚಾರವನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮಳೆಯ ಕಾರಣ ತಳಿಪರಂಬ ಪಟ್ಟುವಂ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಬೈಪಾಸ್‍ನ ಛೇದಕದಲ್ಲಿ ಭೂಕುಸಿತ ಸಂಭವಿಸಿದ ನಂತರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಬಸ್ಸುಗಳು ಸೇರಿದಂತೆ ವಾಹನಗಳು 7ನೇ ಮೈಲಿ ಕೂವೋಡೆ ಕಯ್ಯಂ ಮೂಲಕ ಸಂಚರಿಸಿ ಚಲತ್ತೂರು ಮಂಗಳಶ್ಶೇರಿ ಕುಪ್ಪಂ ಮೂಲಕ ಸಂಚಾರ ವ್ಯವಸ್ಥೆ ಮಾಡಲಾಯಿತು. ತಹಶೀಲ್ದಾರ್ ಅವರ ಸೂಚನೆ ಮೇರೆಗೆ ತಳಿಪರಂಬ ಪೆÇಲೀಸ್ ಇನ್ಸ್‍ಪೆಕ್ಟರ್ ಶಾಜಿ ಪ್ಯಾಟೇರಿ ಸಂಚಾರ ನಿರ್ಬಂಧಗಳನ್ನು ವಿಧಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries