ಕಾಸರಗೋದು: ಭತ್ತದ ಬೇಸಾಯ 'ನಾಟಿ ಉತ್ಸವ' ಬೇಕಲ ಸನಿಹದ ಅರವತ್ ಮುಕ್ಕುಂಡು ಬಯಲಲ್ಲಿ ಜೂ. 28ಹಾಗೂ 29ರಂದು ಜರುಗಲಿದೆ. ಪುಲರಿ ಅರಾವತ್ ನೇತೃತ್ವದಲ್ಲಿ ಉದುಮ ಗ್ರಾಮ ಪಂಚಾಯತ್, ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸಹಯೋಗದೊಂದಿಗೆ ನತ್ತಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಜಯಪ್ರಕಾಶ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಜಿಲ್ಲೆಯ 10 ಶಿಕ್ಷಣ ಸಂಸ್ಥೆಗಳ ಸುಮಾರು 500 ಮಂದಿ ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಮೂಲ ಪಾಠಗಳನ್ನು ಕಲಿಸಲಾಗುವುದು.ಈ ಬಾರಿ ಕೃಷಿ ಶಾಲೆಯಾಗಿ ನಟ್ಟಿ ಆಯೋಜಿಸಲಾಗುತ್ತಿದೆ. ಜೂನ್ 28 ಮತ್ತು 29 ರಂದು ಉದುಮ ಗ್ರಾಮ ಪಂಚಾಯತ್ನ ಮುದಿಯಕಲ್ ಭತ್ತದ ಗದ್ದೆಗಳಲ್ಲಿರುವ ಅರವತ್ ಮುಕ್ಕುಂಡು ಹೊಲದಲ್ಲಿ ನಾಟಿ ಉತ್ಸವ ನಡೆಯಲಿದೆ. ಜೂನ್ 28ರಂದು ಮಧ್ಯಾಹ್ನ 2.30 ಕ್ಕೆ ಚರ್ಚೆ ನಡೆಯಲಿದೆ. ಇದರಲ್ಲಿ ಸಾಂಪ್ರದಾಯಿಕ ರೈತರು "ಭತ್ತದ ಗದ್ದೆ ಪರಿಸರ ವ್ಯವಸ್ಥೆ - ಪರಿಸರ ಮಹತ್ವ ಮತ್ತು ಸ್ಥಳೀಯ ಜ್ಞಾನ" ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಭತ್ತದ ಗದ್ದೆ ಪರಿಸರ ವ್ಯವಸ್ಥೆಗಳನ್ನು ಉತ್ಕøಷ್ಟಗೊಳಿಸುವ ಯೋಜನೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಚರ್ಚೆ ಆಯೋಜಿಸಲಾಗಿದೆ. 28ರಂದು ಬೆಳಗ್ಗೆ 9.30 ಕ್ಕೆ ಉದುಮ ಶಾಸಕ ಸಿ.ಎಚ್.ಕುಞಂಬು ನಾಟಿ ಉತ್ಸವ ಉದ್ಘಾಟಿಸುವರರು. ಉದುಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ವಿ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು. ನಂತರ, ಮಕ್ಕಳು ಮತ್ತು ಸ್ಥಳೀಯರು ವಿವಿಧ ಹೊಲಗಳಲ್ಲಿ ಭತ್ತದ ನೇಜಿ ನಡಲಿದ್ದಾರೆ. ಮಧ್ಯಾಹ್ನ ವಿಶಿಷ್ಟ ಖಾದ್ಯಗಳೊಂದಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, 101 ಬಗೆಯ ಪಾಯಸ ವಿತರಣೆ ನಡೆಯುವುದು.
ಮಧ್ಯಾಹ್ನ 3 ಗಂಟೆಗೆ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತಾನ್ ಅವರು ಕೃಷಿ ತಳಿ ಸಂರಕ್ಷರಾದ ರೀಂದ್ರನ್ ಕೊಡಕ್ಕಾಡ್ ಹಾಗೂ ಕಣ್ಣಾಲಯಂ ನಾರಾಯಣನ್ ಹಾಗೂ ಬೇಕಲದ ಗೋಕುಲಂ ಗೋಶಾಲೆಯನ್ನು ನಡೆಸುತ್ತಿರುವ ನಾಗರತ್ನ ಹೆಬ್ಬಾರ್ ಅವರಿಗೆ ಪುಲಾರಿ ಪ್ರಶಸ್ತಿ ವಿತರಿಸಲಿದ್ದಾರೆ. ಉದುಮ ಗ್ರಾಮಪಂಚಾಯತ್ ಅಧ್ಯಕ್ಷೆ ಪಿ.ಲಕ್ಷ್ಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಡಾ. ವಿ. ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವರ್ಷ ಮೊದಲ ಬಾರಿಗೆ ಪರಿಚಯಿಸಲಾದ ಪ್ರವಾಸಿ ಪುರಸ್ಕಾರವನ್ನು ಮಿನಿ ಮಣಿಕಂಠನ್ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪುಲರಿ ಕಾರ್ಯದರ್ಶಿ ಸನಲ್ ಕುಮಾರ್, ಉಪಾಧ್ಯಕ್ಷ ರಾಜೇಶ್ ಕುಮಾರ್, ಮೇಲ್ಪರಂಬ ಬಿಎಂಸಿ ಸದಸ್ಯ ವಿನೋದ್ ಉದುಮ, ಕೋಶಾಧಿಕಾರಿ ಮೋಹನನ್ ಕೆ, ಮಾಜಿ ಸದಸ್ಯ ವೇಣುಗೋಪಾಲನ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಕುಮಾರನ್ ಟಿ ವಿ ಉಪಸ್ಥಿತರಿದ್ದರು.

