HEALTH TIPS

ತಮಿಳುನಾಡು ಪೊಲೀಸರ ಹೆಸರಲ್ಲಿ ಕರೆ: ಪೇಚಿಗೆ ಸಿಲುಕಿದ ಆಂಧ್ರ ಪೊಲೀಸರು

ಅಮರಾವತಿ: ತಮಿಳುನಾಡು ಪೊಲೀಸರು ಎಂದು ಹೇಳಿಕೊಂಡು ಬಂದ ಕರೆ ಆಂಧ್ರ ಪ್ರದೇಶ ಪೊಲೀಸರನ್ನು ಪೇಚಿಗೆ ಸಿಲುಕಿಸಿದೆ.

ಇಸ್ರೋ ಬಾಹ್ಯಾಕಾಶ ನಿಲ್ದಾಣ ಇರುವ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಭಯೋತ್ಪಾದಕನೊಬ್ಬ ಓಡಾಡುತ್ತಿದ್ದಾನೆಂದು ತಮಿಳುನಾಡು ಪೊಲೀಸರು ಎಂದು ಹೇಳಿಕೊಂಡು ಕರೆ ಬಂದಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಆಂಧ್ರಪ್ರದೇಶ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಬಳಿಕ ಅದು ಹುಸಿ ಕರೆ ಎಂದು ಗೊತ್ತಾಗಿದೆ.ಭಾನುವಾರ ತಡರಾತ್ರಿ ಕರೆ ಬಂದಿದೆ.

ಶ್ರೀಹರಿಕೋಟಾ ಶ್ರೇಣಿ ಎಂದು ಕರೆಯಲಾಗುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವು ಇಸ್ರೋದ ಪ್ರಮುಖ ಉಡಾವಣಾ ತಾಣವಾಗಿದ್ದು ಸುಧಾರಿತ ಉಡಾವಣಾ ಮತ್ತು ಟ್ರ್ಯಾಕಿಂಗ್ ಸೌಲಭ್ಯಗಳನ್ನು ಹೊಂದಿದೆ.

'ನಮಗೆ ಪ್ರದೇಶದಲ್ಲಿ ಯಾವುದೇ ಅಸಾಮಾನ್ಯ ಚಟುವಟಿಕೆ ಕಂಡುಬಂದಿಲ್ಲ. ಇದು ವಂಚನೆಯ ಕರೆ ಎಂದು ತೋರುತ್ತದೆ, ಆದರೆ ನಾವು ನಮ್ಮ ಪರಿಶೀಲನೆಗಳನ್ನು ಮುಂದುವರಿಸುತ್ತಿದ್ದೇವೆ' ಎಂದು ನಾಯ್ಡುಪೇಟ ಉಪ ಪೊಲೀಸ್ ವರಿಷ್ಠಾಧಿಕಾರಿ ಜಿ. ಚಂಟಿಬಾಬು ತಿಳಿಸಿದ್ದಾರೆ.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯೊಂದಿಗೆ ಸಮನ್ವಯ ಸಾಧಿಸಿದ ಅಧಿಕಾರಿಗಳು ಪ್ರದೇಶದ ಸುತ್ತಲೂ ತೀವ್ರ ಶೋಧ ನಡೆಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries