HEALTH TIPS

ಮತ್ತೆ ಅಚ್ಚರಿ ಮೂಡಿಸಿದ ಪಿ.ವಿ. ಅನ್ವರ್: ನಿಲಂಬೂರ್ ಉಪಚುನಾವಣೆಯಲ್ಲಿ ಕಣಕ್ಕೆ: ತೃಣಮೂಲ ಕಾಂಗ್ರೆಸ್ ನಿಂದ ನಾಮಪತ್ರ

ಮಲಪ್ಪುರಂ: ಸದಾ ವಿಚಿತ್ರ ಅಭಿಪ್ರಾಯಗಳನ್ನು ಹೇಳುವ ಮೂಲಕ ನಗೆಪಾಟಾಲಿಗೆ ಈಡಾಗುತ್ತಿರುವ ಪಿ.ವಿ.ಅನ್ವರ್ ನಿನ್ನೆ ಸಂಜೆ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ.

ಪಿ.ವಿ. ಅನ್ವರ್ ನಿಲಂಬೂರ್ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ತಿಳಿಸಿದೆ. ಟಿ.ಎಂ.ಸಿ ರಾಜ್ಯ ಮುಖ್ಯ ಸಂಯೋಜಕ ಸಾಜಿ ಮಂಜಕ್ಕಡಂಬಿಲ್ ಅವರು ನೀಡಿರುವ ಹೇಳಿಕೆಯಂತೆ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಪಿ.ವಿ. ಅನ್ವರ್ ಸೋಮವಾರ ನಿಲಂಬೂರ್ ತಲುಪುವಂತೆ ಪಕ್ಷದ ಎಲ್ಲಾ ನಾಯಕರಿಗೆ ಸೂಚನೆ ನೀಡಿದ್ದಾರೆ. ಪಿ.ವಿ. ಅನ್ವರ್ ಅವರನ್ನು ಯುಡಿಎಫ್ ಮತ್ತು ಎಡಪಂಥೀಯರು ವಂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಮಾನ್ಯ ಜನರ ಭಾವನೆಗಳೇ ಅನ್ವರ್ ಅವರನ್ನು ಸ್ಪರ್ಧೆಗೆ ಕರೆತರುತ್ತಿವೆ. ಧಾರ್ಮಿಕ ಮತ್ತು ಕೆಲವು ಕೋಮು ನಾಯಕರು ಪಿ.ವಿ. ಅನ್ವರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸಾಜಿ ಮಂಜಕ್ಕಡಂಬಿಲ್ ಹೇಳಿದರು. ಟಿ.ಎಂ.ಸಿ ಕಾರ್ಯಕರ್ತರು ಅನ್ವರ್ ಅವರ ಗೆಲುವಿಗೆ ಎಣ್ಣೆ ಹಚ್ಚಿದ ಯಂತ್ರದಂತೆ ಕೆಲಸ ಮಾಡುತ್ತಾರೆ. ಅನ್ವರ್ ಮತ್ತೆ ನಿಲಂಬೂರ್ ಸುಲ್ತಾನನಾಗಿ ಗೆಲ್ಲುತ್ತಾರೆ.

.ಈ ಹಿಂದೆ, ನಿನ್ನೆ ಬೆಳಿಗ್ಗೆಯಷ್ಟೇ ಪಿ.ವಿ. ಅನ್ವರ್ ನಿಲಂಬೂರ್ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಖಂಡಾಘೋಷವಾಗಿ ತಿಳಿಸಿದ್ದರು. ಜನರು ಸ್ಪರ್ಧಿಸಲು ಹಣವನ್ನು ನೀಡುವವರಿದ್ದಾರೆ ಮತ್ತು ತನ್ನನ್ನು ಸ್ಪರ್ಧಿಸಲು ಕೇಳುತ್ತಿದ್ದಾರೆ ಎಂದು ಅನ್ವರ್ ಸಂಜೆ  ಹೇಳಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries