HEALTH TIPS

ಮೊರಾದಾಬಾದ್‌: ರೀಲ್ಸ್‌ ಮಾಡಲು ಹೋಗಿ ಹಾವು ಕಡಿತ

ಮೊರಾದಾಬಾದ್‌ (ಉತ್ತರ ಪ್ರದೆಶ): ಹಾವಿಗೆ ಮುತ್ತಿಕ್ಕುವ ರೀಲ್ಸ್‌ ಮಾಡುವ ಸಂದರ್ಭದಲ್ಲಿ ವ್ಯಕ್ತಿಯ ನಾಲಿಗೆಗೆ ಹಾವು ಕಚ್ಚಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹೈಬತ್‌ಪುರದಲ್ಲಿ ನಡೆದಿದೆ. 

ಈ ಘಟನೆ ಶುಕ್ರವಾರ ಸಂಜೆ ನಡೆದಿದೆ. ರೈತ ಜಿತೇಂದ್ರ ಕುಮಾರ್‌ (50) ಅವರು ಹಾವನ್ನು ಹಿಡಿದು, ಕುತ್ತಿಗೆಗೆ ಸುತ್ತಿಕೊಂಡು ನಿಧಾನವಾಗಿ ಅದರ ತಲೆಯನ್ನು ತಮ್ಮ ಬಾಯಿಯ ಬಳಿಗೆ ತಂದು ಮುತ್ತಿಕ್ಕಲು ಪ್ರಯತ್ನಿಸಿದರು.

ಆಗ ಹಾವು ಕುಮಾರ್‌ ಅವರ ನಾಲಿಗೆಗೆ ಕಚ್ಚಿತು. ಈ ದೃಶ್ಯವಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಹಾವು ಕಚ್ಚಿದ ತಕ್ಷಣವೇ ಅವರನ್ನು ಮೊರಾದಾಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕುಮಾರ್‌ ಅವರ ಸ್ಥಿತಿ ಗಂಭೀರವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries