HEALTH TIPS

ಅಪ್ಡಾ ಮಿತ್ರ ನಾಗರಿಕ ರಕ್ಷಣಾ ತಂಡ ಸಿದ್ದಪಡಿಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ-ಆಸಕ್ತರಿಗೆ ಅವಕಾಶ

ತಿರುವನಂತಪುರಂ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಪ್ಡಾ ಮಿತ್ರ ಕಾರ್ಯಕ್ರಮದ ಭಾಗವಾಗಿ ನೈಸರ್ಗಿಕ ವಿಪತ್ತುಗಳು ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಕೆಲಸ ಮಾಡಲು ನಾಗರಿಕ ರಕ್ಷಣಾ ತಂಡವನ್ನು ಸಿದ್ಧಪಡಿಸುತ್ತಿದೆ.

ಆಸಕ್ತ ಸ್ವಯಂಸೇವಕರಿಗೆ ಏಳು ದಿನಗಳ ವಿಪತ್ತು ಪ್ರತಿಕ್ರಿಯೆ ತರಬೇತಿಯನ್ನು ನೀಡಲಾಗುವುದು. 18-40 ವರ್ಷದೊಳಗಿನವರು ತರಬೇತಿಯಲ್ಲಿ ಭಾಗವಹಿಸಬಹುದು. ಆಯ್ದ ಯುವಕರಿಗೆ ವಾರದ ವಸತಿ ಶಿಬಿರದ ರೂಪದಲ್ಲಿ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ. ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್, ಮೇರಾ ಯುವ ಭಾರತ್, ಎನ್.ಎಸ್.ಎಸ್, ಎನ್ಸಿಸಿ, ರೆಡ್ ಕ್ರಾಸ್, ಸ್ಥಳೀಯ ಸಂಘಟನೆಗಳು, ಟ್ರಾಮಾ ಕೇರ್ ಸದಸ್ಯರು, ವಿಭಾಗಗಳ ಮಾಜಿ ಸ್ವಯಂಸೇವಕರು ಮತ್ತು ಕ್ರೀಡಾ ತಾರೆಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ತುರ್ತು ಕಿಟ್, ಸಮವಸ್ತ್ರ, ಗುರುತಿನ ಚೀಟಿ, ಪ್ರಮಾಣಪತ್ರ ಮತ್ತು ಮೂರು ವರ್ಷಗಳ ವಿಮಾ ರಕ್ಷಣೆಯನ್ನು ಒದಗಿಸಲಾಗುವುದು. ಆಸಕ್ತರು ಜಿಲ್ಲಾ ಮೇರಾ ಯುವ ಭಾರತ್ (ನೆಹರು ಯುವ ಕೇಂದ್ರ) ಕಚೇರಿಯನ್ನು ಸಂಪರ್ಕಿಸಬೇಕು. ದೂರವಾಣಿ: 9074684599.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries