HEALTH TIPS

ಜೈಲಿನಿಂದ ಪರಾರಿಯಾದ ಚಾರ್ಲಿ ಥಾಮಸ್ (ಗೋವಿಂದಚಾಮಿ) ಗೆ 14 ದಿನಗಳ ಬಂಧನ

ಕಣ್ಣೂರು: ಜೈಲಿನಿಂದ ಪರಾರಿಯಾಗಿ ಬಳಿಕ ಬಂಧನಕ್ಕೊಳಗಾದ ಚಾರ್ಲಿ ಥಾಮಸ್ (ಗೋವಿಂದಚಾಮಿ) ಗೆ 14 ದಿನಗಳ ರಿಮಾಂಡ್ ನೀಡಲಾಗಿದೆ. ಈಗಾಗಲೇ ಬಂಧನದಲ್ಲಿದ್ದು, ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ಭದ್ರತೆಯ ಜೈಲಿಗೆ ಬಳಿಕ ಸ್ಥಳಾಂತರಿಸಲಾಗುವುದು.

ಇದಕ್ಕೂ ಮೊದಲು, ಜೈಲಿನಿಂದ ಪರಾರಿಯಾಗಿರುವ ಘಟನೆಯಲ್ಲಿ, ಚಾರ್ಲಿ ಥಾಮಸ್ (ಗೋವಿಂದಚಾಮಿ) ಯನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಪೋಲೀಸರು ನಡೆಸಿದ ಆರಂಭಿಕ ವಿಚಾರಣೆಯಲ್ಲಿ ಆರೋಪಿಯು ಒಂದೂವರೆ ತಿಂಗಳಿನಿಂದ ಯೋಜನೆ ರೂಪಿಸಿ ಜೈಲಿನಿಂದ ಪರಾರಿಯಾಗಿರುವುದಾಗಿ ಬಹಿರಂಗಪಡಿಸಿದ್ದಾನೆ. ಜೈಲಿನ ಸರಳುಗಳನ್ನು ಕತ್ತರಿಸಲು ಸುಮಾರು ಒಂದೂವರೆ ತಿಂಗಳು ಬೇಕಾಯಿತು. ಹೊರಗಿನಿಂದ ಕಾಣದಂತೆ ಬಟ್ಟೆಯಿಂದ ಕಟ್ಟಿಡಲಾಗಿತ್ತು. ಜೈಲಿನಿಂದ ತಪ್ಪಿಸಿಕೊಂಡ ನಂತರ ಗುರುವಾಯೂರು ತಲುಪಿ, ಕದ್ದ ಹಣದಿಂದ ಬೇರೆ ರಾಜ್ಯಕ್ಕೆ ಪರಾರಿಯಾಗುವುದು ಯೋಜನೆಯಾಗಿತ್ತು. ಹಾಲಿನ ಪಾತ್ರೆಗಳು ಮತ್ತು ಡ್ರಮ್‍ಗಳನ್ನು ಪೇರಿಸಿ ಜೈಲಿನ ಗೋಡೆ ಹಾರಿ  ಪರಾರಿಯಾಗಲಾಗಿತ್ತು  ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರೈಲು ನಿಲ್ದಾಣ ಎಲ್ಲಿದೆ ಎಂದು ನಿಖರವಾಗಿ ತಿಳಿದಿಲ್ಲದ ಕಾರಣ ಡಿಸಿ ಕಚೇರಿ ಆವರಣಕ್ಕೆ ತಲುಪಿದ್ದಾಗಿ ಗೋವಿಂದಚಾಮಿ ಪೋಲೀಸರಿಗೆ ತಿಳಿಸಿದ್ದಾನೆ. ಜೈಲಿನ ಹೊರಗೆ ಕೆಲವು ಜನರೊಂದಿಗೆ ತಾನು ನಿರಂತರವಾಗಿ ಸಂಪರ್ಕದಲ್ಲಿದ್ದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ.

ಗೋವಿಂದಚಾಮಿಯನ್ನು 68 ಸೆಲ್‍ಗಳಿರುವ ಬ್ಲಾಕ್ ಬಿ, 10 ರಲ್ಲಿ ಇರಿಸಲಾಗಿತ್ತು, ಅಲ್ಲಿ ಅತ್ಯಂತ ಗಂಭೀರ ಅಪರಾಧಿಗಳನ್ನು ಇರಿಸುವ ಸೆಲ್ ನಲ್ಲಿ ಬಂಧನದಲ್ಲಿದ್ದ. ಇತ್ತೀಚಿನವರೆಗೂ, ಆತನೊಬ್ಬನೇ ಸೆಲ್‍ನಲ್ಲಿದ್ದ. ತಮಿಳುನಾಡಿನ ವ್ಯಕ್ತಿಯೊಬ್ಬ ಕೆಲವು ತಿಂಗಳುಗಳಿಂದ ಈ ಸೆಲ್‍ನಲ್ಲಿದ್ದ. ತಾನು ಕೆಲವು ತಿಂಗಳ ಹಿಂದೆಯೇ ಹೊರಗೆ ಹಾರಲು ಯೋಜಿಸಿದ್ದು,  ಆದರೆ ಕಂಬಿಗಳ ಮೂಲಕ ಹೊರಗೆ ಹಾರಲು ಸಾಧ್ಯವಾಗದ ಕಾರಣ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತನ್ನ ಹೇಳಿಕೆಯಲ್ಲಿ ಪೋಲೀಸರಿಗೆ ಹೇಳಿದ್ದಾನೆ.

ಶುಕ್ರವಾರ ಬೆಳಗಿನ ಜಾವ 1:30 ಕ್ಕೆ ಜೈಲಿನಿಂದ ತಪ್ಪಿಸಿಕೊಂಡ ಗೋವಿಂದಚಾಮಿಯನ್ನು ಬೆಳಿಗ್ಗೆ 10:30 ಕ್ಕೆ ಪೋಲೀಸರು ಪತ್ತೆ ಮಾಡಿದರು. ತಲಪ್ಪುವಿನ ಪಾಳುಬಿದ್ದ ಹೊಲದಲ್ಲಿನ ಬಾವಿಯಲ್ಲಿ ಅಡಗಿಕೊಂಡಿರುವುದು ಕಂಡುಬಂದಿದ್ದ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries