HEALTH TIPS

ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಫೇಸ್‍ಬುಕ್ ಪೋಸ್ಟ್: ಆರೋಪಿಗೆ ಜೈಲು ಶಿಕ್ಷೆ., 2000 ರೂ. ದಂಡ

ಕೊಚ್ಚಿ: ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಫೇಸ್‍ಬುಕ್‍ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಪೆÇೀಸ್ಟ್ ಮಾಡಿದ ವ್ಯಕ್ತಿಗೆ ಮೂರು ದಿನಗಳ ಜೈಲು ಶಿಕ್ಷೆ ಮತ್ತು ರೂ. 2000 ದಂಡ ವಿಧಿಸಲಾಗಿದೆ.

ಎರ್ನಾಕುಳಂನ ಅಳಂಗಡ್ ಮೂಲದ ಪಿ.ಕೆ. ಸುರೇಶ್‍ಕುಮಾರ್ ಅವರನ್ನು ಕ್ರಿಮಿನಲ್ ನ್ಯಾಯಾಲಯ ನಿಂದನೆಗಾಗಿ ಹೈಕೋರ್ಟ್ ವಿಭಾಗೀಯ ಪೀಠ ಶಿಕ್ಷೆ ವಿಧಿಸಿದೆ.

ಫೇಸ್‍ಬುಕ್ ಪೋಸ್ಟ್‍ಗಳು ನ್ಯಾಯಮೂರ್ತಿಗಳಾದ ದೇವನ್ ರಾಮಚಂದ್ರನ್ ಮತ್ತು ದೇವಸ್ವಂ ಪೀಠದ ವಿರುದ್ಧವಾಗಿದ್ದವು.

ಈ ಹಿಂದೆ ಇದೇ ರೀತಿಯ ಫೇಸ್‍ಬುಕ್ ಪೋಸ್ಟ್ ಹಂಚಿಕೆ ಮಾಡಿದ್ದಕ್ಕಾಗಿ ಆರೋಪಿ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲಾಗಿತ್ತು, ಆದರೆ ಅವರು ಕ್ಷಮೆಯಾಚಿಸಿದ ನಂತರ ಮುಂದಿನ ವಿಚಾರಣೆಯನ್ನು ಸ್ಥಗಿತಗೊಳಿಸಲಾಯಿತು.

ತರುವಾಯ, ಪೋಸ್ಟ್‍ಗಳನ್ನು ಮತ್ತೆ ಪ್ರಕಟಿಸಲಾಯಿತು ಮತ್ತು ನ್ಯಾಯಾಲಯವು ಮತ್ತೆ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಕೈಗೆತ್ತಿಕೊಂಡಿತು.

ಪ್ರಕರಣದ ಸಾಕ್ಷಿಗಳ ಹೇಳಿಕೆಗಳು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಫೇಸ್‍ಬುಕ್ ಪೋಸ್ಟ್‍ಗಳಿಂದ ಕ್ರಿಮಿನಲ್ ನ್ಯಾಯಾಂಗ ನಿಂದನೆ ನಡೆದಿದೆ ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಜೋಬಿನ್ ಸೆಬಾಸ್ಟಿಯನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿತು.

ಪ್ರಾಸಿಕ್ಯೂಷನ್ ಪರವಾಗಿ ವಕೀಲ ಕೆ.ಕೆ. ಧೀರೇಂದ್ರಕೃಷ್ಣನ್ ವಾದ ಮಂಡಿಸಿದರು. ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರನ್ನು ಫೇಸ್‍ಬುಕ್‍ನಲ್ಲಿ ಅವಮಾನಿಸಿದ ಘಟನೆಯಲ್ಲಿ ಹೈಕೋರ್ಟ್ ವಕೀಲ ಕುಳತ್ತೂರ್ ಜೈಸಿಂಗ್ ಸಲ್ಲಿಸಿದ ದೂರಿನ ಮೇರೆಗೆ ಕೊಚ್ಚಿ ಸೈಬರ್ ಪೋಲೀಸರು ಪಿ.ಕೆ. ಸುರೇಶ್‍ಕುಮಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಈ ಪ್ರಕರಣವು ಕಾಕನಾಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪರಿಗಣನೆಯಲ್ಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries