HEALTH TIPS

ಮಣಿಪುರ: ರಂಗಕರ್ಮಿ, ಪದ್ಮಶ್ರೀ ಪುರಸ್ಕೃತ ರತನ್‌ ಥಿಯಂ ನಿಧನ

ಇಂಫಾಲ್‌: ಮಣಿಪುರದ ಖ್ಯಾತ ರಂಗಕರ್ಮಿ, ಪದ್ಮಶ್ರೀ ಪುರಸ್ಕೃತ ರತನ್‌ ಥಿಯಂ (77) ಅವರು ಬುಧವಾರ ಆಸ್ಪತ್ರೆಯಲ್ಲಿ ನಿಧನರಾದರು. 

ದೀರ್ಘಕಾಲದಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರನ್ನು ಪ್ರಾದೇಶಿಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ದಾಖಲಿಸಲಾಗಿತ್ತು.

ಅವರು ಬುಧವಾರ ಮಧ್ಯಾಹ್ನ 1.30 ಗಂಟೆಗೆ ನಿಧನರಾದರು ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರಿ ಕಲಾ ಪ್ರಕಾರಗಳನ್ನು ಸಮಕಾಲೀನ ಕರಕುಶಲತೆ, ನಾವೀನ್ಯ ಮತ್ತು ಕಾವ್ಯಾತ್ಮಕ ನಿರೂಪಣೆಗಳೊಂದಿಗೆ ಬೆರೆಸುವುದರಲ್ಲಿ ಥಿಯಂ ಹೆಸರುವಾಸಿಯಾಗಿದ್ದರು. ಅವರಿಗೆ 1989ರಲ್ಲಿ ಪದ್ಮಶ್ರೀ ಪುರಸ್ಕಾರ ದೊರೆತಿತ್ತು.

ಅವರು 1987-1988ರವರೆಗೆ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries