ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರರ ಐದನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ಶುಕ್ರವಾರ ನೆರವೇರಿತು. ಬೆಳಗ್ಗೆ ಕೂಡ್ಲು ಶ್ರೀ ಕಾಲಿಕಾಂಬಾ ಭಜನಾಸಂಘ ದಸದಸ್ಯರಿಂದ ಭಜನಾಸಂಕೀರ್ತನೆ ನಡೆಯಿತು.
ಯಕ್ಷಗಾನ ಕೂಟದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ 'ಕೃಷ್ಣ ಸಾರಥ್ಯ ಸ್ವೀಕಾರ'ಯಕ್ಷಗಾನ ತಾಳಮದ್ದಳೆ ಜರುಗಿತು.
12ರಂದು ಸಂಜೆ 6ಕ್ಕೆ ಬೆಂಗಳೂರಿನ ಸಮನ್ವಯ ಕಲಾಕೇಂದ್ರದ ವಿದ್ವಾನ್ ತಿರುಮಲ ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಸಂಗೀತ ವೈವಿಧ್ಯ ನಡೆಯುವುದು. 13ರಂದು ಮಧ್ಯಾಹ್ನ 2ರಿಂದ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರ ಸ್ಮರಣಾಂಜಲಿ ಅಂಗವಾಗಿ ಸಭಾ ಕಾರ್ಯಕ್ರಮ ನಡೆಯುವುದು. ನಂತರ ಶ್ರೀ ಧರ್ಮಸ್ಥಳ ಮೇಳದ ಅವರ ಒಡನಾಡಿ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಲಿರುವುದು.


