HEALTH TIPS

ಎಡಿಜಿಪಿಯನ್ನು ತೀವ್ರವಾಗಿ ಟೀಕಿಸಿದ ಹೈಕೋರ್ಟ್; ಸನ್ನಿಧಾನಕ್ಕೆ ಟ್ರ್ಯಾಕ್ಟರ್ ಪ್ರವಾಸ ಉದ್ದೇಶಪೂರ್ವಕ, ಇಂತಹ ಕ್ರಮಗಳು ದುರದೃಷ್ಟಕರ

ಕೊಚ್ಚಿ: ಎಡಿಜಿಪಿ ಎಂ.ಆರ್. ಅಜಿತ್‍ಕುಮಾರ್ ಅವರ ಪಂಪಾದಿಂದ ಸನ್ನಿಧಾನಕ್ಕೆ ಟ್ರ್ಯಾಕ್ಟರ್ ಪ್ರಯಾಣ ದುರದೃಷ್ಟಕರ ಎಂದು ಹೈಕೋರ್ಟ್ ಹೇಳಿದೆ.

ಅಜಿತ್‍ಕುಮಾರ್ ಅವರ ಕ್ರಮವನ್ನು ನ್ಯಾಯಾಲಯವು ಉದ್ದೇಶಪೂರ್ವಕ ಎಂದು ಟೀಕಿಸಿದೆ. ಅವರಿಗೆ ಆರೋಗ್ಯ ಸಮಸ್ಯೆಗಳಿದ್ದರೆ ಅವರು ಆಂಬ್ಯುಲೆನ್ಸ್‍ನಲ್ಲಿ ಹೋಗಲು ಸಾಧ್ಯವಿಲ್ಲವೇ ಎಂದು ಹೈಕೋರ್ಟ್ ಕೇಳಿದೆ.

ಎಡಿಜಿಪಿ ಅವರ ಟ್ರ್ಯಾಕ್ಟರ್ ಪ್ರಯಾಣ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂದು ಶಬರಿಮಲೆ ವಿಶೇಷ ಆಯುಕ್ತರು ಹೈಕೋರ್ಟ್‍ಗೆ ವರದಿಯನ್ನು ಸಲ್ಲಿಸಿದ್ದರು. ಟ್ರ್ಯಾಕ್ಟರ್ ಪ್ರಯಾಣ ವಿವಾದದ ನಂತರ ಆಯುಕ್ತರು ವರದಿಯನ್ನು ಸಲ್ಲಿಸಿದ್ದರು.

ನವಗ್ರಹ ಪ್ರತಿಷ್ಠೆಗಾಗಿ ಮೊನ್ನೆ ಶಬರಿಮಲೆ ದೇವಸ್ಥಾನ ಬಾಗಿಲು ತೆರೆದಾಗ ಎಡಿಜಿಪಿ ದರ್ಶನಕ್ಕೆ ತೆರಳಿದ್ದರು. ಈ ತಿಂಗಳ 12 ನೇ ತಾರೀಖಿನ ಸಂಜೆ ಪೋಲೀಸ್ ಟ್ರ್ಯಾಕ್ಟರ್‍ನಲ್ಲಿ ಸನ್ನಿಧಾನಕ್ಕೆ ಹೋಗಿದ್ದ ಎಂ.ಆರ್. ಅಜಿತ್‍ಕುಮಾರ್ 13 ನೇ ತಾರೀಖಿನ ಬೆಳಿಗ್ಗೆ ಅದೇ ಟ್ರ್ಯಾಕ್ಟರ್‍ನಲ್ಲಿ ಹಿಂತಿರುಗಿದರು. ಈ ಸಂಬಂಧ ವಿಶೇಷ ಆಯುಕ್ತರು ದೇವಸ್ವಂ ಜಾಗೃತ ದಳದಿಂದ ವರದಿ ಕೇಳಿದ್ದರು.

ಬೆಟ್ಟ ಹತ್ತುವಾಗ ಪಂಪಾದಿಂದ ಸನ್ನಿಧಾನಕ್ಕೆ ಯಾರನ್ನೂ ಟ್ರ್ಯಾಕ್ಟರ್‍ನಲ್ಲಿ ಕರೆದೊಯ್ಯಬಾರದು ಎಂಬ ಹೈಕೋರ್ಟ್ ಆದೇಶವನ್ನು ಎಡಿಜಿಪಿ ಉಲ್ಲಂಘಿಸಿದ್ದಾರೆ. ಸರಕು ಸಾಗಣೆಗೆ ಮಾತ್ರ ಟ್ರ್ಯಾಕ್ಟರ್ ಬಳಸಬೇಕೆಂದು ಹೈಕೋರ್ಟ್ ಕಟ್ಟುನಿಟ್ಟಾಗಿ ಆದೇಶಿಸಿತ್ತು. ಎಡಿಜಿಪಿ ಈ ಹಿಂದೆ ಶಬರಿಮಲೆ ತಲುಪಿದಾಗಲೂ ಇದೇ ರೀತಿ ಪ್ರಯಾಣಿಸಿದ್ದರು ಎಂದು ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries