HEALTH TIPS

ಮಾತೃಭಾಷೆಯಲ್ಲಿ ಶಿಕ್ಷಣದಿಂದ ಹೆಚ್ಚಿನ ಜ್ಞಾನ ವೃದ್ಧಿ: ಸಿಜೆಐ ಬಿ.ಆರ್‌ ಗವಾಯಿ

ಮುಂಬೈ: ಮಾತೃಭಾಷೆಯಲ್ಲಿ ಶಿಕ್ಷಣ ಪಡೆವುದರಿಂದ ಜ್ಞಾನವು ಹೆಚ್ಚಾಗುತ್ತದೆ. ಇದು ನಮ್ಮ ಜೀವನದಲ್ಲಿ ಮೌಲ್ಯಗಳನ್ನು ತುಂಬುತ್ತದೆ ಎಂದು ಸಿಜೆಐ ಬಿ.ಆರ್‌ ಗವಾಯಿ ಹೇಳಿದರು.

ಮುಂಬೈಯಲ್ಲಿ ತಾವು ಕಲಿತ ಚಿಕಿತ್ಸಕ್‌ ಸಮೂಹ್‌ ಶಿರೋಡ್ಕರ್‌ ಶಾಲೆಗೆ ಭೇಟಿ ನೀಡಿದ್ದ ಗವಾಯಿ ಅವರು ತಮ್ಮ ಹಳೆಯ ಸಹಪಾಠಿಗಳೊಂದಿಗೆ ಮಾತನಾಡಿದರು.

ಈ ವೇಳೆ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದ ಅವರು, 'ನನ್ನ ಜೀವನವನ್ನು ರೂಪಿಸಿದ ಶಿಕ್ಷಕರಿಗೆ ಕೃತಜ್ಞನಾಗಿರುತ್ತೇನೆ. ನಾನು ನನ್ನ ಮಾತೃಭಾಷೆ ಮರಾಠಿ ಮಾದ್ಯಮದಲ್ಲಿ ಇಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ' ಎಂದರು.

'ಇಂದು ನಾನು ಯಾವುದೇ ಸ್ಥಾನ ತಲುಪಿದ್ದರೂ ಅದರಲ್ಲಿ ನನ್ನ ಶಿಕ್ಷಕರ ಹಾಗೂ ಈ ಶಾಲೆಯದ್ದು ಮಹತ್ವದ ಪಾತ್ರವಿದೆ. ಇಲ್ಲಿ ಪಡೆದ ಶಿಕ್ಷಣ ಮತ್ತು ಮೌಲ್ಯಗಳು ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿವೆ. ಭಾಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನನ್ನಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡಿತು' ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries