HEALTH TIPS

ಕೇರಳ ಸಂಸ್ಕøತ ಶಿಕ್ಷಕರ ಒಕ್ಕೂಟದ ವತಿಯಿಂದ ಉಪಜಿಲ್ಲಾ ವಿದ್ಯಾಧಿಕಾರಿಗೆ ಪ್ರತಿಭಟನಾ ಪತ್ರ

ಬದಿಯಡ್ಕ: 2024-25ನೇ ಶೈಕ್ಷಣಿಕ ವರ್ಷಕ್ಕೆ ಸಾಮಾನ್ಯ ಶಿಕ್ಷಣ ಇಲಾಖೆ ನಡೆಸಿದ ಸಂಸ್ಕೃತ ವಿದ್ಯಾರ್ಥಿವೇತನ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿ ಆರು ತಿಂಗಳು ಕಳೆದರೂ, ಕಿರಿಯ, ಹಿರಿಯ ಪ್ರಾಥಮಿಕ ವಿಭಾಗಗಳ ಮೊತ್ತವನ್ನು ಇನ್ನೂ ಮಕ್ಕಳಿಗೆ ಲಭ್ಯವಾಗುವಂತೆ ಮಾಡಲಾಗಿಲ್ಲ. ಸಂಸ್ಕೃತ ಶಿಕ್ಷಣ ಅಭಿವೃದ್ಧಿ ಚಟುವಟಿಕೆಗಳ ಭಾಗವಾಗಿ ವರ್ಷಗಳಿಂದ ನಡೆಯುತ್ತಿರುವ ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲ್ ವಿಭಾಗದ ಸಂಸ್ಕೃತ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಕಳೆದ ವರ್ಷ ತಡವಾಗಿ ನಡೆಸಲಾಯಿತು. ಆಯಾ ವರ್ಷದಲ್ಲಿಯೇ ಸಾಮಾನ್ಯ ಪ್ರಮಾಣಪತ್ರಗಳು ಮತ್ತು ಮೊತ್ತವನ್ನು ವಿತರಿಸಲಾಗುತ್ತಿತ್ತು, ಆದರೆ ಪ್ರಸ್ತುತ ಹೈಸ್ಕೂಲು ವಿಭಾಗದ ಮೊತ್ತವನ್ನು ಮಾತ್ರ ವಿತರಿಸಲಾಗಿದೆ. ಕಿರಿಯ, ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಮೊತ್ತವನ್ನು ಇನ್ನೂ ವಿತರಿಸಲಾಗಿಲ್ಲ. 

142 ಉಪ ಜಿಲ್ಲೆಗಳಲ್ಲಿ 12070 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಮೊತ್ತವನ್ನು ಪಡೆಯಬೇಕಾಗಿದೆ. ಕೇರಳ ಸಂಸ್ಕøತ ಶಿಕ್ಷಕರ ಒಕ್ಕೂಟದ ಉಪಜಿಲ್ಲಾ ಸಮಿತಿಯು ಈ ಸಂಬಂಧ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ.ಶಶಿಧರ ಅವರಿಗೆ ಪ್ರತಿಭಟನಾ ಪತ್ರವನ್ನು ನೀಡಲಾಯಿತು. ಸದರಿ ಮೊತ್ತವನ್ನು ಕೂಡಲೇ ವಿತರಿಸಲು ಅಗತ್ಯಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸಲಾಗಿದೆ. ಕೇರಳ ಸಂಸ್ಕøತ ಶಿಕ್ಷಕರ ಒಕ್ಕೂಟದ ಜಿಲ್ಲಾ ಕೋಶಾಧಿಕಾರಿ ವೆಂಕಟಕೃಷ್ಣ ಭಟ್, ರಂಜಿತ್, ಶಾರದಾ ಪ್ರತಿಭಟನಾ ಪತ್ರ ನೀಡಿದ ನಿಯೋಗದಲ್ಲಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries