ತಿರುವನಂತಪುರಂ: ಕೇರಳದಲ್ಲಿ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟಿಸಲಾದ ಭಾರತದ ತಪ್ಪಾದ ನಕ್ಷೆಯನ್ನು ತೀವ್ರ ಪ್ರತಿಭಟನೆಯ ನಂತರ ಹಿಂಪಡೆಯಲಾಗಿದೆ.
ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ಚಿತ್ರಿಸುವ ನಕ್ಷೆಯನ್ನು ಬಳಸಿಕೊಂಡು ಪ್ರಧಾನಿಯವರ ವಿದೇಶಾಂಗ ಭೇಟಿಯನ್ನು ಟೀಕಿಸಿದ ಕಾಂಗ್ರೆಸ್ ಕೇರಳ ಎಕ್ಸ್-ಹ್ಯಾಂಡಲ್, ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ಇತರರಿಂದ ಟೀಕೆಗೆ ಗುರಿಯಾಗಿತ್ತು. ಬಳಿಕ ಚಿತ್ರವನ್ನು ಹಿಂಪಡೆಯಲಾಯಿತು.





