HEALTH TIPS

ವರ್ಕಾಡಿ-ವಸತಿ ಪ್ರದೇಶದ ಬಳಿ ಕಾರ್ಯನಿರ್ವಹಿಸುತ್ತಿರುವ ಹಂದಿ ಸಾಕಣೆ ಕೇಂದ್ರಗಳ ವಿರುದ್ಧ ಕ್ರಮ ಕೈಗೊಂಡ ಜಾರಿ ದಳ

ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತಿಯ ಬೇಕರಿ-ತೌಡುಗೋಳಿ ಮುಖ್ಯ ರಸ್ತೆಯಲ್ಲಿರುವ ಜಂಕ್ಷನ್ ನಲ್ಲಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಂದಿ ಸಾಕಣೆ ಕೇಂದ್ರವನ್ನು ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಜಾರಿ ದಳ ಪರಿಶೀಲಿಸಿತು. 

ತಪಾಸಣೆಯಲ್ಲಿ ಗಂಭೀರ ಉಲ್ಲಂಘನೆಗಳು ಕಂಡುಬಂದಿವೆ. 500 ಕ್ಕೂ ಹೆಚ್ಚು ಹಂದಿಗಳನ್ನು ಸಾಕಣೆ ಮಾಡುವ ಈ ಫಾರ್ಮ್‍ನ ಕೊಳಚೆ ನೀರನ್ನು ಮಾಲೀಕರ ಆಸ್ತಿಯಲ್ಲಿರುವ ತೆರೆದ ಗುಂಡಿಗೆ ಬಿಡಲಾಗುತ್ತಿದೆ. ಕೊಳಚೆ ನೀರನ್ನು ತೋಟದ ಕೆಳಗೆ ಹರಿಯುವ ಹೊಳೆಗೆ ಹರಿಸುತ್ತಿವುದು ಕಂಡುಬಂದಿದೆ. ಇಲ್ಲಿ ಸ್ಥಾಪಿಸಲಾದ ಜೈವಿಕ ಅನಿಲ ಸ್ಥಾವರವು ಕಾರ್ಯನಿರ್ವಹಿಸುತ್ತಿಲ್ಲ. ಅಸ್ತಿತ್ವದಲ್ಲಿರುವ ಹಂದಿಗಳನ್ನು ಆದಷ್ಟು ಶೀಘ್ರ ಸ್ಥಳಾಂತರಿಸಲು ಮತ್ತು ಅದನ್ನು ವೈಜ್ಞಾನಿಕವಾಗಿ ಮತ್ತು ಪರವಾನಗಿಯೊಂದಿಗೆ ಮಾತ್ರ ಪುನರಾರಂಭಿಸಲು ಮಾಲೀಕರಿಗೆ ತಿಳಿಸಲಾಯಿತು.

ಇದು ಸುತ್ತಮುತ್ತಲಿನ ಜನರಿಗೆ ಮತ್ತು ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟು ಮಾಡುತ್ತಿದೆ. ಕೇರಳ ಪಂಚಾಯತ್ ರಾಜ್ ಕಾಯ್ದೆ 219ಕೆ ಅಡಿಯಲ್ಲಿ ಉಲ್ಲಂಘನೆಗಾಗಿ 25,000 ರೂ. ದಂಡ ವಿಧಿಸಲಾಯಿತು ಮತ್ತು ಉಲ್ಲಂಘನೆ ಪುನರಾವರ್ತನೆಯಾದರೆ ಕಾನೂನು ಕ್ರಮ ಕೈಗೊಳ್ಳಲು ಪಂಚಾಯತಿಗೆ ಸೂಚಿಸಲಾಯಿತು. ವರ್ಕಾಡಿಯಲ್ಲಿರುವ ಗೋದಾಮಿನಿಂದ ನಿಷೇಧಿತ ಕುಡಿಯುವ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ರೂ. 25,000 ದಂಡ ವಿಧಿಸಲಾಯಿತು. ಜಿಲ್ಲಾ ಜಾರಿ ದಳದ ಪ್ರಮುಖ ಕೆ.ವಿ. ಮುಹಮ್ಮದ್ ಮದನಿ, ಸಹಾಯಕ ಕಾರ್ಯದರ್ಶಿ ಎಂ.ಕೆ. ನಿಶಾಂತ್, ಆರೋಗ್ಯ ನಿರೀಕ್ಷಕಿ ಪಿ.ಕೆ. ಜಾಸ್ಮಿನ್, ಗುಮಾಸ್ತೆ ಆರ್. ಹರಿತಾ, ಮತ್ತು ದಳದ ಸದಸ್ಯ ಇ.ಕೆ. ಫಾಸಿಲ್ ತಪಾಸಣೆಯಲ್ಲಿ ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries