ಢಾಕಾ: 'ನೆಲಸಮ ಮಾಡಲಾಗುತ್ತಿರುವ ಮೈಮೆನ್ಶಿಂಘೋ ಜಲ್ಲೆಯಲ್ಲಿರುವ ಬಂಗಲೆಗೂ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಪೂರ್ವಜರ ಬಂಗಲೆಗೂ ಸಂಬಂಧವಿಲ್ಲ. ಈ ಬಗ್ಗೆ ಪುರಾತತ್ವ ಇಲಾಖೆಯಲ್ಲಿಯೂ ವಿಚಾರಿಸಲಾಗಿದೆ' ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
'ಹರಿಕಿಶೋರ್ ರೇ ರಸ್ತೆ'ಯಲ್ಲಿ ಸತ್ಯಜಿತ್ ರೇ ಅವರ ಪೂರ್ವಜರ ಬಂಗಲೆ ಇತ್ತು. ಆದರೆ, ಅವರು ಇದನ್ನು ಬಹಳ ಹಿಂದೆಯೇ ಮಾರಾಟ ಮಾಡಿದ್ದಾರೆ. ಈ ಬಂಗಲೆ ಖರೀದಿಸಿದ ವ್ಯಕ್ತಿಯು ಇಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಿದ್ದರು. ಈಗ ಈ ಕಟ್ಟಡವನ್ನೇ ನೆಲಸಮ ಮಾಡಲಾಗುತ್ತಿದೆ' ಎಂದು ಸಚಿವಾಲಯ ಹೇಳಿದೆ.




