HEALTH TIPS

ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜೀನಾಮೆಗೆ ವ್ಯಾಪಕ ಒತ್ತಾಯ: ಕೊಟ್ಟಾಯಂ ವೈದ್ಯಕೀಯ ಕಾಲೇಜು ಮುಂದೆ ಸರಣಿ ಪ್ರತಿಭಟನೆಗಳು: ಜಲಫಿರಂಗಿ ಪ್ರಯೋಗ

ಕೊಟ್ಟಾಯಂ: ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಕುಸಿದು ತಳಯೋಲಪರಂಬ ಮೂಲದ ಬಿಂದು ಅವರ ಸಾವಿನ ವಿರುದ್ಧ ಪ್ರತಿಭಟನೆಗಳು ವ್ಯಾಪಕವಾಗಿ ನಡೆಯಿತು. ಯುವ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ವೈದ್ಯಕೀಯ ಕಾಲೇಜಿನ ಪ್ರವೇಶದ್ವಾರವನ್ನು ತಡೆದರು. ಪೋಲೀಸರು ಬ್ಯಾರಿಕೇಡ್ ತಮದಿರಿಸಿ ಮೆರವಣಿಗೆಯನ್ನು ನಿಲ್ಲಿಸಿದರೂ, ಯುವ ಕಾಂಗ್ರೆಸ್ ಕಾರ್ಯಕರ್ತರು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾರಿ ಘರ್ಷಣೆ ಸಂಭವಿಸಿದೆ.

ಕಾರ್ಯಕರ್ತರು ಬ್ಯಾರಿಕೇಡ್ ಮುರಿದರು. ನಂತರ, ಪೋಲೀಸರು ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಸಿದರು. ಬ್ಯಾರಿಕೇಡ್ ಮುರಿದು ಪೋಲೀಸರೊಳಗೆ ನುಗ್ಗಿದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಘರ್ಷಣೆಯ ನಂತರ, ಪೋಲೀಸರು ನಾಲ್ಕು ಸುತ್ತು ಜಲಫಿರಂಗಿಗಳನ್ನು ಬಳಸಿದರು.

ಕೋಪಗೊಂಡ ಕಾರ್ಯಕರ್ತರು ಪೋಲೀಸರ ಮೇಲೆ ಬಾಟಲಿಗಳು ಮತ್ತು ಕಲ್ಲುಗಳನ್ನು ಎಸೆದರು. ಪ್ರವೇಶದ್ವಾರದಲ್ಲಿ ಬ್ಯಾರಿಕೇಡ್ ಅನ್ನು ಮುರಿದ ಕಾರ್ಯಕರ್ತರ ಮೇಲೆ ಪೆÇಲೀಸರು ಜಲ ಫಿರಂಗಿಗಳನ್ನು ಬಳಸಿದರು. ಬಳಿಕ  ಸ್ಥಳದಲ್ಲಿ ದೊಡ್ಡ ಸಂಘರ್ಷ ನಡೆಯಿತು. ಬ್ಯಾರಿಕೇಡ್ ಅನ್ನು ಉರುಳಿಸಲಾಯಿತು ಮತ್ತು ಕಾರ್ಯಕರ್ತರು ಅದರ ಮೇಲೆ ನಿಂತರು.

ಯುವ ಕಾಂಗ್ರೆಸ್ ಮೆರವಣಿಗೆಯನ್ನು ಶಾಸಕ ಚಾಂಡಿ ಉಮ್ಮನ್ ಉದ್ಘಾಟಿಸಿದರು. ರಾಹುಲ್ ಮಾಂಗೂಟನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವ ಕಾಂಗ್ರೆಸ್ ಮೆರವಣಿಗೆಯ ನಂತರ ಬಿಜೆಪಿ ಕಾರ್ಯಕರ್ತರು ವೈದ್ಯಕೀಯ ಕಾಲೇಜು ಗೇಟ್ ಅನ್ನು ಮುತ್ತಿಗೆ ಹಾಕಿದರು. ಗಾಂಧಿನಗರ ಪೋಲೀಸ್ ಠಾಣೆ ಬಳಿ ಮೆರವಣಿಗೆ ನಡೆದ ನಂತರ ದಿಗ್ಬಂಧನವನ್ನು ಪ್ರಾರಂಭಿಸಲಾಯಿತು. ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ದಿಗ್ಬಂಧನವನ್ನು ಉದ್ಘಾಟಿಸಿದರು.


ಕೊಟ್ಟಾಯಂ ಹೊರತುಪಡಿಸಿ, ಪತ್ತನಂತಿಟ್ಟ, ತ್ರಿಶೂರ್, ಕೊಲ್ಲಂ ಮತ್ತು ತಿರುವನಂತಪುರಂನಲ್ಲಿ ಪ್ರತಿಭಟನೆಗಳು ನಡೆದವು. ಹಲವೆಡೆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದವು. ಪೋಲೀಸರು ಲಾಠಿ ಚಾರ್ಜ್ ಮಾಡಿದರು. ಕೆಲವು ಸ್ಥಳಗಳಲ್ಲಿ ಜಲ ಫಿರಂಗಿಗಳನ್ನು ಬಳಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries