HEALTH TIPS

ಜುಂಬಾ ವಿವಾದ: ಶಿಕ್ಷಕ ಟಿ.ಕೆ. ಅಶ್ರಫ್ ಅವರ ಅಮಾನತು ರದ್ದುಗೊಳಿಸಿದ ಹೈಕೋರ್ಟ್. ಕ್ರಮ ಪರಿಶೀಲಿಸುವಂತೆ ಆಡಳಿತ ಮಂಡಳಿಗೆ ನ್ಯಾಯಾಲಯ ನಿರ್ದೇಶನ

ಕೊಚ್ಚಿ: ಜುಂಬಾ ನೃತ್ಯದ ವಿರುದ್ಧ ನಿಲುವು ತೆಗೆದುಕೊಂಡ ಶಿಕ್ಷಕ ಟಿ.ಕೆ. ಅಶ್ರಫ್ ಅವರ ಅಮಾನನ್ನು ಹೈಕೋರ್ಟ್ ರದ್ದುಗೊಳಿಸಿದೆ. ಕ್ರಮ ಪರಿಶೀಲಿಸುವಂತೆ ಆಡಳಿತ ಮಂಡಳಿಗೆ ಹೈಕೋರ್ಟ್ ನಿರ್ದೇಶನ. ಶಿಕ್ಷಕರ ವಿವರಣೆ ಕೇಳುವಂತೆಯೂ ನ್ಯಾಯಾಲಯ ಸೂಚನೆ ನಿಡಿದೆ.

ತಮ್ಮ ವಾದಗಳನ್ನು ಆಲಿಸದೆ ಕ್ರಮ ಕೈಗೊಳ್ಳಲಾಗಿದೆ ಎಂದು ಟಿ.ಕೆ. ಅಶ್ರಫ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಮೆಮೊ ನೀಡಿದ ಮರುದಿನವೇ ಕ್ರಮ ಕೈಗೊಳ್ಳಲಾಯಿತು. ಮೆಮೊ ನೀಡಿದರೆ, ಅದರಲ್ಲಿ ಉತ್ತರವನ್ನು ಕೇಳಲು ಸಿದ್ಧರಿರಬೇಕು. ಅದು ಆಗಲಿಲ್ಲ ಎಂದು ಟಿ.ಕೆ. ಅಶ್ರಫ್ ಅವರ ವಕೀಲರು ಗಮನಸೆಳೆದರು.

ಶಾಲೆಗಳಲ್ಲಿ ಜುಂಬಾ ನೃತ್ಯವನ್ನು ಕಡ್ಡಾಯಗೊಳಿಸುವುದರ ವಿರುದ್ಧ ಟಿ.ಕೆ. ಅಶ್ರಫ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿ ಕ್ರಮ ಕೈಗೊಳ್ಳಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries