ಮುಳ್ಳೇರಿಯ: ದೇಲಂಪಾಡಿ ಬೆಳ್ಳಿಪ್ಪಾಡಿಯ ಶಕ್ತಿ ಯುವಕ ಮಂಡಲ ಹಾಗೂ ಊರಿನ ಎಲ್ಲ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜು. 13 ರಂದು ಭಾನುವಾರ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರ ಸಮೀಪದ ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಇವರ ಗದ್ದೆಯಲ್ಲಿ ಕೆಸರಗದ್ದೆ ಕ್ರೀಡಾಕೂಟ ಕೆಸರ್ ಡೊಂಜಿ ದಿನ ಆಯೋಜಿಸಲಾಗಿದೆ.
ಬೆಳಗ್ಗೆ 9: ರಿಂದ ಸಂಜೆವರೆಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಜಯರಾಜ್ ಬಿ.ಎಚ್ ಅಧ್ಯಕ್ಷತೆಯಲ್ಲಿ ಕೆ.ಜನಾರ್ದನ್ ನಾಯಕ್ ಕೋಟಿಗದ್ದೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಶೇಷ ಆಕರ್ಷಣೆಯಾಗಿ ಧರ್ಮ ಚಾವಡಿ ಚಿತ್ರತಂಡ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಕಾರ್ಯಕ್ರಮ ವೈವಿಧ್ಯಮಯವಾಗಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.





