HEALTH TIPS

ಕಾಡು ಪ್ರಾಣಿಗಳ ಉಪಟಳದ ವಿರುದ್ಧ ವಯನಾಡಿನ ಪ್ರತಿಭಟನೆ: ಸ್ಥಳೀಯರ ಮೇಲೆ ಲಾಠಿ ಚಾರ್ಜ್‍ಗೈದ ಪೋಲೀಸರು

ವಯನಾಡು: ಮೆಪ್ಪಾಡಿಯ ತಂಜಿಲೋಡ್‍ನಲ್ಲಿ ಕಾಡು ಪ್ರಾಣಿಗಳ ಉಪಟಳ ಮತ್ತು ಅಧಿಕೃತರ ಅನಾಸ್ಥೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯರ ಮೇಲೆ ಪೋಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ರಸ್ತೆ ತಡೆ ನಡೆಸಿದ ಜನಪರ ಸಮಿತಿ ಕಾರ್ಯಕರ್ತರ ವಿರುದ್ಧ ಪೋಲೀಸ್ ಕ್ರಮ ಕೈಗೊಂಡರು. 

ಈ ಪ್ರದೇಶದಲ್ಲಿ ಕಾಡು ಆನೆಗಳ ಕಿರುಕುಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಪ್ರತಿಭಟನೆ ನಡೆಸಲಾಯಿತು.


ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಸ್ಥಳೀಯರು ಮೆಪ್ಪಾಡಿ-ಚುರಲ್ಮಲಾ ರಸ್ತೆಯನ್ನು ತಡೆದಿದ್ದರು. ಕಳೆದ ಕೆಲವು ದಿನಗಳಿಂದ ಇಲ್ಲಿ ಕಾಡು ಆನೆಗಳ ಕಿರುಕುಳ ತೀವ್ರಗೊಂಡಿತ್ತು. ಕಾಡು ಪ್ರಾಣಿಗಳು ಬೆಳೆಗಳಿಗೆ ಭಾರಿ ಹಾನಿಯನ್ನುಂಟುಮಾಡುತ್ತಿವೆ. ಸುಮಾರು ಮೂರು ಗಂಟೆಗಳ ಕಾಲ ದಿಗ್ಬಂಧನ ನಡೆಯಿತು. ಡಿಎಫ್‍ಒ ಅಜಿತ್ ಕೆ ರಾಮನ್ ಮತ್ತು ಇತರರು ಸ್ಥಳಕ್ಕೆ ಆಗಮಿಸಿದರು. ಆದಾಗ್ಯೂ, ಜಿಲ್ಲಾಧಿಕಾರಿಗಳು ಖುದ್ದಾಗಿ ಅಲ್ಲಿಗೆ ತಲುಪಬೇಕೆಂದು ಸ್ಥಳೀಯರು ಒತ್ತಾಯಿಸಿದರು. ಈ ಮಧ್ಯೆ, ಪೆÇಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಒಂಬತ್ತು ಜನರನ್ನು ಬಂಧಿಸಿ ಪೋಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಂತರ, ಜನಪ್ರತಿನಿಧಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ನಾಯಕರ ನಡುವೆ ಚರ್ಚೆಯ ನಂತರ ಸ್ಥಳೀಯರನ್ನು ಬಿಡುಗಡೆ ಮಾಡಲಾಯಿತು. ಪ್ರದೇಶಕ್ಕೆ ಪ್ರವೇಶಿಸಿರುವ ಕಾಡು ಆನೆಗಳನ್ನು ಓಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಡಿಎಫ್‍ಒ ತಿಳಿಸಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries