HEALTH TIPS

ಕರಂದಕ್ಕಾಡಿನ ಸಾಂಸ್ಕøತಿಕ ಕಲಾಕೇಂದ್ರ ಪದ್ಮಗಿರಿ ಕಲಾಕುಟೀರಕ್ಕೆ ಶುದ್ಧನೀರಿನ ಘಟಕ ಕೊಡುಗೆ

ಕಾಸರಗೋಡು: ಕಳೆದ ಎರಡು ದಶಕಗಳಿಂದ ಕಾಸರಗೋಡಿನ ಕರಂದಕ್ಕಾಡಿನಲ್ಲಿ ಸಕ್ರಿಯವಾಗಿ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಡುತ್ತಿರುವ ಪದ್ಮಗಿರಿ ಕಲಾ ಕುಟೀರ ಕ್ಕೆ ಮಂಗಳೂರಿನ ಟಾಪ್ ವಿಡಿಯೋ ಅಂಡ್ ಫೆÇೀಟೋ ಸಂಸ್ಥೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.

ಸಂಸ್ಥೆಯ ಪದಾಧಿಕಾರಿಗಳಾದ ಚಂದ್ರಕಾಂತ ವೋರಾ (ಟಿಕ್ಕು) ಅವರು ಪ್ರಥಮ ನೀರಿನ ಲೋಟವನ್ನು ಖ್ಯಾತ ಮೂಳೆ ತಜ್ಞ ಡಾ. ಕೆ. ಕೆ. ಶಾನುಭಾಗ್ ಅವರಿಗೆ ನೀಡುವ ಮೂಲಕ ಉದ್ಘಾಟಿಸಿದರು. ಸಮಾರಂಭದಲ್ಲಿ ಖ್ಯಾತ ಛಾಯಾಗ್ರಾಹಕ ಕೆ. ಗಣೇಶ್ ಶಣೈ, ಚಲನಚಿತ್ರ ನಟಿ ಶೋಭಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಂಗ ಚಿನ್ನಾರಿಯ ನಿರ್ದೇಶಕರು ಹಾಗೂ ಸಂಚಾಲಕ ಕಾಸರಗೋಡು ಚಿನ್ನಾ, ನಿರ್ದೇಶಕ ಕೆ. ಸತೀಶ್ ಚಂದ್ರ ಭಂಡಾರಿ, ಲೇಖಕಿ ವಿಜಯಲಕ್ಷ್ಮೀ ಶಾನುಭೋಗ್, ಸೂರ್ಯಕಾಂತಿ, ಸ್ವರ ಚಿನ್ನಾರಿಯ ಬಬಿತಾ ಆಚಾರ್ಯ, ಪದಾಧಿಕಾರಿಗಳು ಹಾಗೂ ಅಂತರ್ ಧ್ವನಿಯ ಗಾಯಕ ಗಾಯಕಿಯರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries