ಮಂಜೇಶ್ವರ: ಮೀಯಪದವು ಶ್ರೀ ಗುರುನರಸಿಂಹ ಯಕ್ಷ ಬಳಗದ ವಾರ್ಷಿಕೋತ್ಸವ ಯಕ್ಷ ಚಿಗುರು -2025 ಸಮಾರಂಭ ಸೆ. 13ನೇ ಶನಿವಾರ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಲಿದೆ. ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಾಹಾವಿಷ್ಣು ದೇವಸ್ಥಾನ ದೇಲಂತೊಟ್ಟು ಬಜೆ,ಹೇರೂರು ಕ್ಷೇತ್ರದಲ್ಲಿ ಗಣ್ಯರ ಸಮಕ್ಷಮ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಯಕ್ಷಬಳಗ ಮೀಯಪದವು ತಂಡದ ಅಧ್ಯಕ್ಷ ವೇದಮೂರ್ತಿ ಗಣೇಶ ನಾವಡ ಮೀಯಪದವು ಹಾಗೂ ತಂಡದ ಸರ್ವಸದಸ್ಯರು ಹಿತೈಶಿಗಳು ಭಾಗವಹಿಸಿದ್ದರು.

.jpg)
