HEALTH TIPS

ಮಾನವ ಕಳ್ಳಸಾಗಣೆ ಕೂಡ ಒಂದು ಸಾಮಾಜಿಕ ಸಮಸ್ಯೆ: ಕೇರಳ ಡಿಜಿಪಿ

ತಿರುವನಂತಪುರಂ: ಮಹಿಳೆಯರು, ಮಕ್ಕಳು ಮತ್ತು ಅನಿವಾಸಿ ಕಾರ್ಮಿಕರ ಕಳ್ಳಸಾಗಣೆ ಕೇವಲ ಕಾನೂನು ಸಮಸ್ಯೆಯಲ್ಲ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಯೂ ಆಗಿದೆ ಎಂದು ಡಿಜಿಪಿ ರಾವಡ ಚಂದ್ರಶೇಖರ್ ಹೇಳಿದರು.

ಕೇರಳ ಪೋಲೀಸರು ಮತ್ತು ಸ್ವಯಂಸೇವಾ ಚಟುವಟಿಕೆಗಳ ಸಂಘ (ಎವಿಎ) ಆಯೋಜಿಸಿದ್ದ ಭಾರತದಲ್ಲಿ ಮಾನವ ಕಳ್ಳಸಾಗಣೆ ಕುರಿತು ರಾಜ್ಯಮಟ್ಟದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಮಾನವ ಕಳ್ಳಸಾಗಣೆ ತಡೆಗಟ್ಟಲು ಜನರನ್ನು ಜಾಗೃತಗೊಳಿಸುವುದು ಮುಖ್ಯ. ಶಾಲೆಗಳು, ಪಂಚಾಯತ್ ಮಟ್ಟಗಳು ಮತ್ತು ಕಾರ್ಮಿಕ ಗುತ್ತಿಗೆದಾರರಲ್ಲಿ ಇಂತಹ ಜಾಗೃತಿ ಅಭಿಯಾನಗಳನ್ನು ನಿರಂತರವಾಗಿ ನಡೆಸಬೇಕು ಎಂದು ಅವರು ಹೇಳಿದರು. ತಿರುವನಂತಪುರಂ ಪೆÇಲೀಸ್ ತರಬೇತಿ ಕಾಲೇಜಿನ ಮೈಂಡ್ ಆಡಿಟೋರಿಯಂನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಮಾನವ ಕಳ್ಳಸಾಗಣೆ ವಿರೋಧಿ ಘಟಕದ ನೋಡಲ್ ಅಧಿಕಾರಿ ಡಿಐಜಿ ಎಸ್. ಅಜಿತಾ ಬೇಗಂ ವಹಿಸಿದ್ದರು. ಎಡಿಜಿಪಿ ಎಸ್. ಶ್ರೀಜಿತ್ ಮುಖ್ಯ ಭಾಷಣ ಮಾಡಿದರು. ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಎಸ್. ಶಮ್ನಾಡ್, ಎವಿಎ ರಾಜ್ಯ ಸಂಯೋಜಕ ಪ್ರಸ್ರೀನ್ ಕುನ್ನಂಪಲ್ಲಿ, ಎಸ್‍ಎಪಿ ಕಮಾಂಡೆಂಟ್ ಯೋಗೇಶ್ ಮಂಡಯ್ಯ, ಪೆÇಲೀಸ್ ತರಬೇತಿ ಕಾಲೇಜಿನ ಉಪ ಪ್ರಾಂಶುಪಾಲ ಎಸ್. ಅಜಯ್‍ಕುಮಾರ್ ಮತ್ತು ಇತರರು ಭಾಗವಹಿಸಿದ್ದರು.

ನಂತರ, ಮಾಜಿ ಡಿ. ಡೈರೆಕ್ಟರ್ ಪಬ್ಲಿಕ್ ಪ್ರಾಸಿಕ್ಯೂಷನ್ ಅಡ್ವ. ಪಿ. ಪ್ರೇಮನಾಥ್, ಡಾ. ವಿಲ್ಸನ್. ಮಾಜಿ ಎಸ್ಪಿ ಸುನೀಶ್ಕುಮಾರ್. ಆರ್. ಸೈಬರ್ ಆಪರೇಷನ್ಸ್ ಎಸ್ಪಿ ಅಂಕಿತ್ ಅಶೋಕನ್, ರೈಲ್ವೆ ಎಸ್ಪಿ ಕೆ.ಎಸ್. ಶಹನ್ಶಾ ಮತ್ತು ಇತರರು ವಿವಿಧ ವಿಷಯಗಳ ಕುರಿತು ಚರ್ಚೆಗಳನ್ನು ನಡೆಸಿದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries