HEALTH TIPS

ಮಕ್ಕಳ ಮೇಲಿನ ದೌರ್ಜನ್ಯಕ್ಕಾಗಿ ಒಂಬತ್ತು ಶಿಕ್ಷಕರ ವಜಾ: ಸಚಿವ ವಿ. ಶಿವನ್‍ಕುಟ್ಟಿ

ತಿರುವನಂತಪುರಂ: ಶಾಲೆಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕಾಗಿ ಇದುವರೆಗೆ ಒಂಬತ್ತು ಶಿಕ್ಷಕರನ್ನು ವಜಾಗೊಳಿಸಲಾಗಿದೆ ಎಂದು ಸಚಿವ ವಿ. ಶಿವನ್‍ಕುಟ್ಟಿ ಹೇಳಿದ್ದಾರೆ.

70 ಜನರ ಫೈಲ್‍ಗಳು ವಶದಲ್ಲಿವೆ. ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಮೇಲಿನ ದೌರ್ಜನ್ಯವನ್ನು ಸಹಿಸಲಾಗದು ಮತ್ತು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಕುರಿತು ಪೋಲೀಸರು ತರಗತಿಗಳನ್ನು ನಡೆಸಬೇಕು ಎಂದು ಸಚಿವರು ಹೇಳಿದರು.


ಈ ಮಧ್ಯೆ, ಕಾಸರಗೋಡಿನ ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಥಳಿಸಿ ವಿದ್ಯಾರ್ಥಿಯ ಕಿವಿತಮ್ಮಟೆ ಹಾನಿಗೊಳಗಾದ ಘಟನೆಯಲ್ಲಿ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಬೇಡಗಂ ಪೋಲೀಸರು ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೊನ್ನೆ, ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಎಂ. ಅಶೋಕನ್ ಥಳಿಸಿದ ಪರಿಣಾಮ ವಿದ್ಯಾರ್ಥಿಯೊಬ್ಬನ ಕಿವಿತಮ್ಮಟೆ ಮುರಿದಿತ್ತು. ಅಸೆಂಬ್ಲಿ ಸಭೆಯ ಸಮಯದಲ್ಲಿ ತನ್ನ ಕಾಲಿನಿಂದ ಜಲ್ಲಿಕಲ್ಲು ಸರಿಸಿದ ಕೋಪದಲ್ಲಿ ಥಳಿಸಲಾಗಿತ್ತು ಎಂದು ವಿದ್ಯಾರ್ಥಿ ದೂರು ನೀಡಿದ್ದಾನೆ.

ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಪನಾಯಲ್ ಬಟ್ಟತ್ತೂರಿನ ಎಂ. ಅಶೋಕನ್ ವಿರುದ್ಧ ಜೆ.ಜೆ. ಕಾಯ್ದೆಯಡಿ ಹಲ್ಲೆ ಮತ್ತು ಗಾಯಗೊಳಿಸುವಿಕೆ ಮತ್ತು ಜಾಮೀನು ರಹಿತ ಆರೋಪಗಳನ್ನು ಹೊರಿಸಲಾಗಿದೆ.

ಅಶೋಕನ್ ಕಡ್ಡಾಯ ರಜೆಯ ಮೇಲೆ ಹೋಗಿದ್ದಾರೆ. ವೈದ್ಯಕೀಯ ವರದಿಯನ್ನು ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲು ಪೋಲೀಸರು ಪ್ರಯತ್ನಿಸುತ್ತಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries