HEALTH TIPS

ಕೇರಳದ ಕ್ಯಾಂಪಸ್‍ಗಳಲ್ಲಿ ವಿಭಜನೆ ಭೀತಿ ದಿನವನ್ನು ಆಚರಿಸದಿರಲು ಸರ್ಕಾರ ನಿರ್ಧಾರ: ರಾಜ್ಯಪಾಲರ ಕ್ರಮ ಕೋಮು ಧ್ರುವೀಕರಣಕ್ಕೆ ಕಾರಣವಾಗುತ್ತದೆ: ಸಚಿವೆ ಆರ್. ಬಿಂದು

ತಿರುವನಂತಪುರಂ: ಕೇರಳದ ಕ್ಯಾಂಪಸ್‍ಗಳಲ್ಲಿ ವಿಭಜನೆ ಭೀತಿ ದಿನವನ್ನು ಆಚರಿಸದಿರಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವೆ ಆರ್. ಬಿಂದು ಹೇಳಿರುವರು.

ಅಭೂತಪೂರ್ವ ಕ್ರಮದ ಭಾಗವಾಗಿ ವಿಭಜನೆ ಭೀತಿ ದಿನವನ್ನು ಆಚರಿಸಲು ರಾಜ್ಯಪಾಲರು ಆದೇಶ ನೀಡಿದ್ದಾರೆ, ಆದರೆ ರಾಜ್ಯಪಾಲರ ಈ ನಡೆ ಕೋಮು ಧ್ರುವೀಕರಣಕ್ಕೆ ಕಾರಣವಾಗುತ್ತದೆ ಎಂದು ಸಚಿವರು ಹೇಳಿದರು.

ವಿಶ್ವವಿದ್ಯಾಲಯಗಳು ಕ್ಯಾಂಪಸ್‍ಗಳಲ್ಲಿ ಯಾವ ಕಾರ್ಯಕ್ರಮಗಳನ್ನು ನಡೆಸಬೇಕೆಂದು ನಿರ್ದೇಶಿಸಲು ಸಾಧ್ಯವಿಲ್ಲ. ಕೋಮು ವೈರತ್ವಕ್ಕೆ ಕಾರಣವಾಗುವ ವಿಷಯಗಳನ್ನು ಕ್ಯಾಂಪಸ್‍ಗಳಲ್ಲಿ ನಡೆಸಬಾರದು. ಎಲ್ಲರೂ ಜಾತ್ಯತೀತತೆಯನ್ನು ಉತ್ತೇಜಿಸಲು ಪ್ರಯತ್ನಿಸಬೇಕು ಎಂದು ಸಚಿವರು ಮಾಧ್ಯಮಗಳಿಗೆ ತಿಳಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries