HEALTH TIPS

ಮುಳಿಂಜ ಶಾಲೆಯಲ್ಲಿ ಚುನಾವಣೆ

ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಚುನಾವಣೆ ನಡೆಸಲಾಯಿತು. ವಿವಿಧ ಚಿನ್ನೆಯಡಿ ಸ್ಪರ್ಧಿಸಿದ ಅಭ್ಯರ್ಥಿಗಳು ತಮ್ಮ ನಾಮನಿರ್ದೇಶ ಪತ್ರವನ್ನು ಚುನಾವಣಾಧಿಕಾರಿ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆಗೆ ಅವರಿಗೆ ನೀಡಿದರು. 

ನವೀನ ರೀತಿಯಲ್ಲಿ ನಡೆದ ಚುನಾವಣೆಗೆ ಉದ್ಯಾವರ ತೋಟ ಶಾಲೆಯ ಮುಖ್ಯ ಶಿಕ್ಷಕ ಇಸ್ಮಾಯಿಲ್ ಮತ್ತು ರವಿಶಂಕರ್ ಮಾಸ್ತರ್ ಸಾಕ್ಷಿಯಾದರು. ಶಾಲಾ ಶಿಕ್ಷಕ ಅಬ್ದುಲ್ ಬಶೀರ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳೇ ಚುನಾವಣಾಧಿಕಾರಿಗಳಾದರು. ಶಿಕ್ಷಕಿ ರೇಷ್ಮಾ ಅವರ ಮುಂದಾಳುತನದಲ್ಲಿ ಮತ ಎಣಿಕೆ ನಡೆದು ಶಾಲಾ ನಾಯಕನಾಗಿ ಮೊಹಮ್ಮದ್ ಅನಸ್ ಆರಿಸಲ್ಪಟ್ಟನು. ವಿಜೇತರಾದ  ದಕ್ಸಿತ್,  ಅಭಿಯ ಹನಾನ್, ಮೊಹಮ್ಮದ್ ಸಾಹಿಲ್, ಅಬೂಬಕ್ಕರ್ ಸಿದ್ದೀಕ್ ಅವರನ್ನು ಆರೋಗ್ಯ, ಆಹಾರ, ಕ್ರೀಡೆ, ವಿದ್ಯಾಭ್ಯಾಸ ಮಂತ್ರಿಗಳಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭ ನಡೆದ ವಿಜಯೋತ್ಸವದ ಮೆರವಣಿಗೆ ನಡೆಯಿತು. ಹಿರಿಯ ಶಿಕ್ಷಕ ರಿಯಾಸ್ ಪೆರಿಂಗಡಿ ಪ್ರತಿಜ್ಞೆ ಬೋಧಿಸಿದರು. ಪ್ರತಿ ಮಂತ್ರಿಗಳಿಗೂ ಮಾರ್ಗದರ್ಶಕರಾಗಿ ಶಿಕ್ಷಕಿ ಅನಿತಾ ಮತ್ತು ಅನುಕೃಷ್ಣ ನಿಯುಕ್ತಗೊಂಡರು. ಶಿಕ್ಷಕಿ ಐಶ್ವರ್ಯ ಶಾಲಾ ಕೆಲಸ ಕಾರ್ಯಗಳನ್ನು, ಮಂತ್ರಿಗಳ ಜವಾಬ್ದಾರಿ ಹಾಗೂ ಕರ್ತವ್ಯವನ್ನು ಆಮೂಲಾಗ್ರವಾಗಿ ತಿಳಿಸಿಕೊಟ್ಟರು. ಶಿಕ್ಷಕಿ ಧನ್ಯಾ ಸ್ವಾಗತಿಸಿ, ಜಸಿಲಾ ಟೀಚರ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries