HEALTH TIPS

ಮಕ್ಕಳು ಕುಣಿದು ಕುಪ್ಪಳಿಸಲು ಬಿಡಿ; ಹಬ್ಬದ ದಿನಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಬಾರದು: ಸಚಿವ ವಿ. ಶಿವನ್‍ಕುಟ್ಟಿ

ತ್ರಿಶೂರ್: ಶಾಲೆಗಳಲ್ಲಿ ಹಬ್ಬದ ದಿನಗಳಲ್ಲಿ ಮಕ್ಕಳಿಗೆ ಸಮವಸ್ತ್ರ ಕಡ್ಡಾಯಗೊಳಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ತಿಳಿಸಿದ್ದಾರೆ. ಮಕ್ಕಳ ಬೇಡಿಕೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. 

ಹಬ್ಬದ ದಿನಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಬಾರದು ಎಂದು ಸಚಿವ ವಿ. ಶಿವನ್‍ಕುಟ್ಟಿ ಫೇಸ್‍ಬುಕ್ ಪೋಸ್ಟ್ ಮೂಲಕ ತಿಳಿಸಿರುವರು. ಶಾಲೆಗಳಲ್ಲಿ ಹಬ್ಬದ ದಿನಗಳಲ್ಲಿ ಮಕ್ಕಳಿಗೆ ಸಮವಸ್ತ್ರ ಕಡ್ಡಾಯಗೊಳಿಸಬಾರದು. ಮಕ್ಕಳು ವರ್ಣರಂಜಿತ ಚಿಟ್ಟೆಗಳಂತೆ ಹಾರಾಡಲು ಮತ್ತು ಆನಂದಿಸಲು ಬಿಡಿ. ಈ ನಿರ್ಧಾರ ಮಕ್ಕಳ ಬೇಡಿಕೆಯಂತೆ ಆಗಿದೆ ಎಂದು ಸಚಿವರು ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.

ತ್ರಿಶೂರ್‍ನಲ್ಲಿ ನಡೆದ ರಾಜ್ಯ ಶಾಲಾ ಕಲೋಲಸ ಸ್ವಾಗತ ಗುಂಪು ರಚನಾ ಸಭೆಯಲ್ಲಿ ಸಚಿವರು ಇದನ್ನು ಘೋಷಿಸಿದರು. ಇತ್ತೀಚಿನ ಇತಿಹಾಸದಲ್ಲಿ ಅತಿದೊಡ್ಡ ಕಲೋತ್ಸವ ಸ್ವಾಗತ ಗುಂಪು ರಚನಾ ಸಭೆ ತ್ರಿಶೂರ್‍ನಲ್ಲಿ ನಡೆಯಿತು ಎಂದು ಸಚಿವರು ಹೇಳಿದರು. ಈ ವರ್ಷದ ರಾಜ್ಯ ಶಾಲಾ ಕಲಾ ಉತ್ಸವವು ತ್ರಿಶೂರ್‍ನಲ್ಲಿ ಜನವರಿ 7 ರಿಂದ 11 ರವರೆಗೆ ನಡೆಯಲಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries