ನವದೆಹಲಿ: ಗಗನಯಾನಿ ಶುಭಾಂಶು ಶುಕ್ಲಾ ಅವರ ಜೀವನಗಾಥೆಯನ್ನು ಒಳಗೊಂಡ 'ಸ್ಕೈ ವಾಸ್ ನೆವರ್ ದ ಲಿಮಿಟ್' ಕೃತಿಯು ಬಿಡುಗಡೆಯಾಗಿದೆ.
ರೂಪಾ ಸಂಸ್ಥೆಯು ಹೊರತಂದಿರುವ ಕೃತಿಯನ್ನು ಸಾಕ್ಷ್ಯಚಿತ್ರ ನಿರ್ಮಾಪಕ ಆರ್. ನಾರಾಯಣ್ ಬರೆದಿದ್ದಾರೆ. ಕೃತಿಯ ಬೆಲೆ ₹295. ಆನ್ಲೈನ್ ಹಾಗೂ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ.
ಕೃತಿಯು ಏಳು ಅಧ್ಯಯನಗಳನ್ನು ಒಳಗೊಂಡಿದೆ. ಲಖನೌದಿಂದ ಭೂಕಕ್ಷೆ ತನಕ, 'ಪರಂಪರೆಯಲ್ಲ, ಕೇವಲ ನಿರ್ಣಯ', ನಾಯಕನ ಒಳಪಯಣ, ದೇಶದ ಹೆಮ್ಮೆ- ನೂರು ಕೋಟಿ ನಿರೀಕ್ಷೆ ಸೇರಿದಂತೆ, ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಪತ್ನಿಯ ಅಭಿಪ್ರಾಯವನ್ನು ಕೃತಿ ಒಳಗೊಂಡಿದೆ.

