HEALTH TIPS

ಛತ್ತೀಸ್‍ಘಡ್‍ನಲ್ಲಿ ಕ್ರೈಸ್ತ ಭಗಿನಿಯರ ಬಂಧನ: ಕಾಂಗ್ರೆಸ್‍ನಿಂದ ಪ್ರತಿಭಟನೆ

ಮಂಜೇಶ್ವರ: ಹಳ್ಳಿಗಾಡಿನ ಆದಿವಾಸಿಗಳ ಸೇವೆ ಮಾಡುತ್ತಿದ್ದ ಇಬ್ಬರು ಕ್ರೈಸ್ತ ಭಗಿನಿಯರನ್ನು ಅನ್ಯಾಯವಾಗಿ ಬಂಧಿಸಿ ಛತ್ತೀಸ್‍ಘಡ್ ಸರ್ಕಾರ ಜೈಲಿ ಗಟ್ಟಿದ್ದು ಅದರ ಕೆಟ್ಟ ಫಲಗಳನ್ನು ಅನುಭವಿಸಲಿದೆ ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್ ಹೇಳಿದ್ದಾರೆ. 

ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಮಜಿರ್ಪಳ್ಳದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಶಾಹುಲ್ ಹಮೀದ್ ಪೆರ್ಲ, ಉಮ್ಮರ್ ಬೋರ್ಕಳ, ಚಂದ್ರಶೇಖರ ಶೆಟ್ಟಿ ಬೆಜ್ಜ, ಹರ್ಷಾದ್ ವರ್ಕಾಡಿ, ಮನ್ಸೂರ್ ಬಿ.ಎಂ, ಖಲೀಲ್ ಬಜಾಲ್, ಮುಹಮ್ಮದ್ ಮಜಾಲ್, ಫ್ರಾನ್ಸಿಸ್ ಡಿ'ಸೋಜಾ, ಇಕ್ಬಾಲ್ ಕಳಿಯೂರು, ಪುರುಷೋತ್ತಮ ಅರಿಬೈಲ್, ಹನೀಫ್ ಪಡಿಂಙರ್, ಬಾಬು ಬಂದ್ಯೋಡು, ಗಣೇಶ್ ಪಾವೂರು, ಕಮಲಾಕ್ಷಿ, ಶಾಂತಾ ಆರ್ ನಾಯ್ಕ, ಗೀತಾ ಬಂದ್ಯೋಡು, ಮಮತಾ ದಿವಾಕರ್, ಸೀತಾ ಡಿ, ಐರಿನ್, ಜಮೀಲಾ, ರೇಷ್ಮಾಟಿ.ವಿ, ಅಜೀಜ್ ಕಲ್ಲೂರು, ಸತ್ಯನ್ ಉಪ್ಪಳ, ಹಮೀದ್ ಕಣಿಯೂರು, ಎಲಿಯಾಸ್ ಡಿ'ಸೋಜಾ, ಗಂಗಾಧರ ಕೆಎಸ್, ಸದಾಶಿವ ಕೆ, ಬಾಸಿತ್ ತಲೆಕ್ಕಿ, ಶೀನ ಕೆದುಂಬಾಡಿ, ರಂಜಿತ್ ಮಂಜೇಶ್ವರ, ಎ.ಎಂ ಉಮ್ಮರ್ ಕುಂಞ, ಎಸ್.ಅಬ್ದುಲ್ ಖಾದರ್ ಹಾಜಿ, ವಿನೋದ್ ಪಾವೂರು, ಅಲಿ ಧರ್ಮನಗರ, ಕಮಲಾಕ್ಷ ಧರ್ಮನಗರ, ವಿಕ್ಟರ್ ಡಿ'ಸೋಜಾ, ಬಾಲಕೃಷ್ಣ, ವಸಂತರಾಜ್ ಶೆಟ್ಟಿ, ಸದಾಶಿವ ಪಜ್ವ, ಸತೀಶ್ ಅರಿಬೈಲ್, ಉಮ್ಮರ್ ಬೆಜ್ಜ ಗೋಪಾಲ ಲೆಂಕ್ರಿಕಾಡು, ಮೂಸಾ ಡಿಕೆ, ಯಾಕೂಬ್ ಕೋಡಿ, ಮಾಲಿಂಗ ಮಂಜೇಶ್ವರ, ಅಶ್ರಫ್ ಆನೆಕಲ್ಲು, ಅಶ್ರಫ್ ಕೆ.ಕೆ., ಅಬೂಸಾಲಿ ಮುರತ್ತಣೆ, ಮುಸ್ತಫಾ ಟಿ.ಎ, ಸಲಾಂ ಮಾಂಕೋಡಿ, ಶಮೀರ್ ಮಾಂಕೋಡಿ, ಅಬೂಬಕ್ಕರ್ ಡಿ, ಅಬೂಬಕ್ಕರ್ ಉರ್ಣಿ, ಉಮ್ಮರ್ ಪಾಲೆಂಗ್ರಿ, ಅಬ್ದುಲ್ಲ ಹಾಜಿ ಕೆದಕ್ಕಾರ್, ಇಬ್ರಾಹಿಂ ಹಾಜಿ ಸುಳ್ಯಮೆ, ಚಂದ್ರಶೇಖರ ಅರಿಬೈಲ್, ಅಬೂಬಕ್ಕರ್ ಮಣಿಪರಂಬ, ಸಮದ್ ಕೆದಕ್ಕಾರ್, ಮೊಯ್ದಿನ್ ಹಾಜಿ ಬಳಪ್ಪು, ಶರೀಫ್ ಪಾಲೆಂಗ್ರಿ, ಟಿ.ಎಂ ಮೊಯ್ದಿನ್, ಕೆಎಚ್ ಅಬೂಬಕ್ಕರ್, ಮುಸ್ತಫಾ ವೇದೋಡಿ, ಇಬ್ರಾಹಿಂ ಧರ್ಮನಗರ ಮುಂತಾದವರು ಉಪಸ್ಥಿತರಿದ್ದರು. ದಿವಾಕರಿ ಎಸ್ ಜೆ ಸ್ವಾಗತಿಸಿ, ಮುಹಮ್ಮದ್ ಸೀಗಂಡಡಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries