HEALTH TIPS

ರಿಪೋರ್ಟರ್ ಟಿವಿ ತ್ರಿಶೂರ್ ಬ್ಯೂರೋ ಮೇಲೆ ಯುವ ಕಾಂಗ್ರೆಸ್ ದಾಳಿ: ಇಬ್ಬರು ಯುವ ಕಾಂಗ್ರೆಸ್ ನಾಯಕರ ಬಂಧನ. ನಾಲ್ವರು ಆರೋಪಿಗಳು ಪರಾರಿ

ತ್ರಿಶೂರ್: ರಿಪೋರ್ಟರ್ ಟಿವಿಯ ತ್ರಿಶೂರ್ ಬ್ಯೂರೋ ವಿರುದ್ಧ ಯುವ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿಥುನ್ ಮೋಹನ್ ಮತ್ತು ಯುವ ಕಾಂಗ್ರೆಸ್ ತ್ರಿಶೂರ್ ಜಿಲ್ಲಾ ಉಪಾಧ್ಯಕ್ಷ ವಿಷ್ಣು ಚಂದ್ರನ್ ಅವರನ್ನು ಬಂಧಿಸಲಾಗಿದೆ.   


ತಿರುವನಂತಪುರದ ತಂಬಾನೂರು ರೈಲು ನಿಲ್ದಾಣದಲ್ಲಿ ಪೆÇಲೀಸರು ಮಿಥುನ್ ಮೋಹನ್ ಅವರನ್ನು ಬಂಧಿಸಿದ್ದಾರೆ. ತ್ರಿಶೂರ್‍ನ ತೆಕ್ಕಿನ್‍ಕಾಡುವಿನಿಂದ ವಿಷ್ಣು ಚಂದ್ರನ್ ಅವರನ್ನು ಬಂಧಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿಲ್ಲ. ಪ್ರಕರಣದ ಇತರ ಆರೋಪಿಗಳು ತ್ರಿಶೂರ್ ವಿಧಾನಸಭಾ ಅಧ್ಯಕ್ಷ ಕೆ. ಸುಮೇಶ್ ವಿಲ್ವಟ್ಟಮ್, ಮಂಡಲ ಅಧ್ಯಕ್ಷ ಸೌರಾಘ್, ನಿಖಿಲ್ ದೇವ್ ಮತ್ತು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಮಲ್ ಜೇಮ್ಸ್.

ರಿಪೋರ್ಟರ್ ಟಿವಿಯಲ್ಲಿ ಮಹಿಳಾ ಪತ್ರಕರ್ತರು ನೀಡಿರುವ ಕಿರುಕುಳ ದೂರಿನ ಬಗ್ಗೆ ಕ್ರಮ ಕೈಗೊಳ್ಳಲು ಆಡಳಿತ ಮಂಡಳಿ ಸಿದ್ಧವಿಲ್ಲದ ಕಾರಣ ಪ್ರತಿಭಟನೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಿವರಿಸಿದ್ದಾರೆ.

ಆದರೆ, ಶಾಸಕ ರಾಹುಲ್ ಮಾಂಕೂಟತ್ತಿಲ್  ಅವರಿಗೆ ಸಂಬಂಧಿಸಿದ ಸುದ್ದಿಗಳನ್ನು ವರದಿ ಮಾಡಿದ್ದೇ ಹಿಂಸಾಚಾರಕ್ಕೆ ಕಾರಣ ಎಂದು ರಿಪೋರ್ಟರ್ ಟಿವಿ ಆಡಳಿತ ಮಂಡಳಿ ತಿಳಿಸಿದೆ.

ಶುಕ್ರವಾರ ಬೆಳಿಗ್ಗೆ, ಘೋಷಣೆಗಳನ್ನು ಕೂಗುತ್ತಾ ಬಂದ ಕಾರ್ಯಕರ್ತರು ಬ್ಯೂರೋದಲ್ಲಿ ಕಾರಿನ ಮೇಲೆ ಯುವ ಕಾಂಗ್ರೆಸ್ ಧ್ವಜವನ್ನು ಇರಿಸಿ ಕಚೇರಿಯ ಬಾಗಿಲಿಗೆ ಕಪ್ಪು ಎಣ್ಣೆ ಸುರಿದಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries