HEALTH TIPS

ಓಣಂ ಹಬ್ಬಕ್ಕೆ ಕೇರಳದ ಎಲ್ಲಾ ಪಡಿತರ ಚೀಟಿದಾರರಿಗೆ ಅಕ್ಕಿ : ಸಚಿವ ಜಿ.ಆರ್. ಅನಿಲ್

ತಿರುವನಂತಪುರಂ: ಕೇಂದ್ರ ಸರ್ಕಾರ ಅರ್ಹ ಪಡಿತರ ಚೀಟಿದಾರರಿಗೆ ಅಕ್ಕಿ ನೀಡದಿದ್ದರೂ, ಓಣಂ ಹಬ್ಬಕ್ಕೆ ಕೇರಳದ ಎಲ್ಲಾ ಪಡಿತರ ಚೀಟಿದಾರರಿಗೆ ಅಕ್ಕಿ ನೀಡಲಾಗುವುದು ಎಂದು ಸಚಿವ ಜಿ.ಆರ್. ಅನಿಲ್ ಹೇಳಿದ್ದಾರೆ.

ಬಿಳಿ ಕಾರ್ಡ್‍ದಾರರಿಗೆ ಪಡಿತರ ಅಂಗಡಿಗಳ ಮೂಲಕ ಹದಿನೈದು ಕಿಲೋ ಅಕ್ಕಿ (ಹತ್ತು ಕಿಲೋ ಬಿಳ್ತಿಗೆ, ಐದು ಕಿಲೋ ಕುಸುಲಕ್ಕಿ ) ನೀಡಲಾಗುವುದು. ನೀಲಿ ಕಾರ್ಡ್‍ದಾರರಿಗೆ ಪ್ರಸ್ತುತ ಲಭ್ಯವಿರುವ ಎರಡು ಕಿಲೋ ಜೊತೆಗೆ, ಪ್ರತಿ ಕಾರ್ಡ್‍ಗೆ ಹತ್ತು ಕಿಲೋ ಅಕ್ಕಿಯನ್ನು ಸಹ ನೀಡಲಾಗುವುದು.

ಪಿಂಕ್ ಕಾರ್ಡ್‍ದಾರರಿಗೆ ಅಕ್ಕಿ ಉಚಿತ. ಪ್ರತಿ ವ್ಯಕ್ತಿಗೆ ಐದು ಕಿಲೋ ನೀಡಲಾಗುತ್ತದೆ. ಅವರಿಗೆ ಪ್ರತಿ ಕಾರ್ಡ್‍ಗೆ ಹೆಚ್ಚುವರಿ ಐದು ಕಿಲೋ ನೀಡಲಾಗುವುದು. ಓಣಂಗೂ ಮುನ್ನ ಮೂರೂ ಕಾರ್ಡ್ ಹೊಂದಿರುವವರಿಗೆ 10.90 ರೂ.ಗೆ ನೀಡಲಾಗುವುದು.

ಸಪ್ಲೈಕೋ ಮಳಿಗೆಗಳಲ್ಲಿ 29 ರೂ.ಗೆ ಎಂಟು ಕಿಲೋ ಅಕ್ಕಿ ನೀಡಲಾಗುತ್ತದೆ. ಓಣಂ ಹಬ್ಬದ ಸಂದರ್ಭದಲ್ಲಿ ಎಲ್ಲಾ ಕಾರ್ಡ್ ಹೊಂದಿರುವವರಿಗೆ 25 ರೂ.ಗೆ 20 ಕಿಲೋ ಅಕ್ಕಿ ನೀಡಲಾಗುವುದು.

ಪ್ರಸ್ತುತ ನೀಡಲಾಗುತ್ತಿರುವ ಎಂಟು ಕೆಜಿ ಜೊತೆಗೆ, ಸಪ್ಲೈಕೋ ಮೂಲಕ 25 ರೂ.ಗೆ ನೀಡಲಾಗುವುದು. ಸಪ್ಲೈಕೋ ಮೂಲಕ ಒಂದು ಕೆಜಿ ತೆಂಗಿನ ಎಣ್ಣೆಯನ್ನು 349 ರೂ. ಸಬ್ಸಿಡಿ ದರದಲ್ಲಿ ನೀಡಲಾಗುವುದು.

ಸಬ್ಸಿಡಿ ರಹಿತ ತೆಂಗಿನ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries