HEALTH TIPS

ತ್ರಿಶೂರ್‍ನ ಹುಲಿ ಕುಣಿತ ತಂಡಗಳಿಗೆ ಓಣಂ ಉಡುಗೊರೆಯಾಗಿ 3 ಲಕ್ಷ ರೂ.ಗಳನ್ನು ಘೋಷಿಸಿದ ಸುರೇಶ್ ಗೋಪಿ

ತ್ರಿಶೂರ್: ಹುಲಿ ಕುಣಿತ (ಪುಲಿಕಳಿ) ಗುಂಪುಗಳಿಗೆ ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಓಣಂ ಉಡುಗೊರೆ ಘೋಷಿಸಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ತ್ರಿಶೂರ್‍ನ ಪುಲಿಕಳಿ ಗುಂಪುಗಳಿಗೆ ಆರ್ಥಿಕ ಸಹಾಯವನ್ನು ನಿಗದಿಪಡಿಸಿದೆ.

ಪ್ರತಿ ಗುಂಪಿಗೆ 3 ಲಕ್ಷ ರೂ.ಗಳನ್ನು ನೀಡಲಾಗುವುದು. ಸುರೇಶ್ ಗೋಪಿ ಅವರೇ ಇದನ್ನು ತಮ್ಮ ಫೇಸ್‍ಬುಕ್ ಪುಟದ ಮೂಲಕ ತಿಳಿಸಿದ್ದಾರೆ.

ಡಿಪಿಎಚ್ ಯೋಜನೆಯ ಭಾಗವಾಗಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ತ್ರಿಶೂರ್‍ನ ಹುಲಿ ಕುಣಿತ ತಂಡಗಳಿಗೆ 3 ಲಕ್ಷ ರೂ.ಗಳನ್ನು ಹಂಚಿಕೆ ಮಾಡುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಸುರೇಶ್ ಗೋಪಿ ಸ್ಪಷ್ಟಪಡಿಸಿದ್ದಾರೆ. ತ್ರಿಶೂರ್‍ನ ಪುಲಿಕಳಿ ಗುಂಪುಗಳಿಗೆ ಇದು ತಮ್ಮ ಓಣಂ ಉಡುಗೊರೆ ಎಂದು ಸುರೇಶ್ ಗೋಪಿ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ಇದನ್ನು ಸಾಧ್ಯವಾಗಿಸುವಲ್ಲಿ ಎಲ್ಲಾ ರೀತಿಯ ಸಹಾಯವನ್ನು ಒದಗಿಸಿದ್ದಕ್ಕಾಗಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಸುರೇಶ್ ಗೋಪಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries