HEALTH TIPS

ಕೇರಳದ ಕನಸಿನ ಯೋಜನೆಗೆ ಶಂಕುಸ್ಥಾಪನೆ: ವಯನಾಡ್ ಸುರಂಗ ನಿರ್ಮಾಣಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ

ಕೋಝಿಕೋಡ್: ಅನಕ್ಕಂಪೊಯಿಲ್ ಕಲ್ಲಾಡಿ - ಮೆಪ್ಪಾಡಿ ಸುರಂಗ ನಿರ್ಮಾಣಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಶಂಕುಸ್ಥಾಪನೆ ನೆರವೇರಿಸಿದರು. 

ಸುರಂಗ ನಿರ್ಮಾಣ ಪೂರ್ಣಗೊಂಡಾಗ ಸುಧೀರ್ಘಕಾಲದ ಪ್ರಯಾಣದ ತೊಂದರೆಗಳು ಪರಿಹಾರವಾಗುತ್ತವೆ. ಜನರು ಈ ಯೋಜನೆಯನ್ನು ಬಹಳ ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ.ಪ್ರಸ್ತುತ, ಜನರು ವ್ಯಾಪಾರ ಉದ್ದೇಶಗಳಿಗಾಗಿ ಮತ್ತು ಇತರ ಉದ್ದೇಶಗಳಿಗಾಗಿ ವಯನಾಡ್‍ಗೆ ಹೋಗಲು ಕಿಲೋಮೀಟರ್‍ಗಳಷ್ಟು ಪ್ರಯಾಣಿಸಬೇಕಾಗಿದೆ. ಅವರು ಟ್ರಾಫಿಕ್ ಜಾಮ್‍ನಲ್ಲಿ ಗಂಟೆಗಟ್ಟಲೆ ಕಳೆಯಬೇಕಾಗಿದೆ. 

ಸುರಂಗವು ಸಾಕಾರಗೊಂಡರೆ, ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಜನರು ಆಶಿಸುತ್ತಾರೆ. ಈ ಸುರಂಗವು ಅನಕ್ಕಂಪೊಯಿಲ್ ಮತ್ತು ಹತ್ತಿರದ ಪ್ರದೇಶಗಳ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ.

ಕೆಐಐಎಫ್‍ಬಿಯ ಆರ್ಥಿಕ ನೆರವಿನೊಂದಿಗೆ 2134 ಕೋಟಿ ರೂ. ವೆಚ್ಚದಲ್ಲಿ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಇದು ಭಾರತದ ಮೂರನೇ ಅತಿ ಉದ್ದದ ಅವಳಿ ಕೊಳವೆ ಸುರಂಗ ಮಾರ್ಗವಾಗಿದ್ದು, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸಲು ನಿರ್ಮಿಸಲಾಗುತ್ತಿದೆ.

ಕೊಚ್ಚಿ-ಬೆಂಗಳೂರು ಕೈಗಾರಿಕಾ ಕಾರಿಡಾರ್‍ನ ಭಾಗವಾಗಿರುವ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಂತ್ಯವಿಲ್ಲದ ಸಾಧ್ಯತೆಗಳಿಗೆ ಬಾಗಿಲು ತೆರೆಯುವ ಈ ಸುರಂಗವು ಕೇರಳದ ಅಭಿವೃದ್ಧಿಯಲ್ಲಿ ಭಾರಿ ಜಿಗಿತವನ್ನು ಸೃಷ್ಟಿಸುತ್ತದೆ.

ಯೋಜನೆ ಪೂರ್ಣಗೊಂಡ ನಂತರ, ತಾಮರಸ್ಸೇರಿ ಪಾಸ್‍ನಲ್ಲಿ ದಟ್ಟಣೆ ನಿವಾರಣೆಯಾಗುತ್ತದೆ, ಕೋಯಿಕ್ಕೋಡ್-ವಯನಾಡ್ ಸಂಚಾರ ಸುಗಮವಾಗುತ್ತದೆ ಮತ್ತು ಪ್ರಯಾಣದ ಸಮಯವೂ ಕಡಿಮೆಯಾಗುತ್ತದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries