HEALTH TIPS

ಪ್ರಸಿದ್ಧ ಚಿತ್ರಕಲಾವಿದ ನಂಬೂದಿರಿಯವರ ರೇಖಾಚಿತ್ರಗಳ ಮೂಲ ಪ್ರತಿಗಳು ಕೇರಳ ಸರ್ಕಾರಕ್ಕೆ ಹಸ್ತಾಂತರ

ತಿರುವನಂತಪುರಂ: ಪ್ರಸಿದ್ಧ ಚಿತ್ರಕಲಾವಿದ ನಂಬೂದಿರಿ ಅವರ ರೇಖಾಚಿತ್ರಗಳ ಮೂಲ ಪ್ರತಿಗಳನ್ನು ಕೇರಳ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಕಲಾವಿದ ನಂಬೂದಿರಿ ಸಮ್ಮಾನ್ ಟ್ರಸ್ಟ್ ವರ್ಣಚಿತ್ರಗಳನ್ನು ಸಾಂಸ್ಕೃತಿಕ ಇಲಾಖೆಗೆ ಹಸ್ತಾಂತರಿಸಿತು. ತಿರುವನಂತಪುರಂನ ವಿಧಾನಸಭಾ ಸಂಕೀರ್ಣದ ಮಾಧ್ಯಮ ಕೊಠಡಿಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ವರ್ಣಚಿತ್ರಗಳನ್ನು ಸ್ವೀಕರಿಸಿದರು. 


ಹಸ್ತಾಂತರಿಸಲಾದ ವರ್ಣಚಿತ್ರಗಳನ್ನು ಕೇರಳ ಲಲಿತಕಲಾ ಅಕಾಡೆಮಿಯು ಕೇರಳದ ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸಲಿದೆ. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಇಲಾಖೆಯ ಕಾರ್ಯದರ್ಶಿ ಡಾ.ರಾಜನ್ ಎನ್ ಖೋಬ್ರಗಡೆ, ಸಾಂಸ್ಕೃತಿಕ ಇಲಾಖೆಯ ನಿರ್ದೇಶಕಿ ದಿವ್ಯಾ ಎಸ್.ಅಯ್ಯರ್, ಕೇರಳ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮುರಳಿ ಚೀರೋತ್, ಕಾರ್ಯದರ್ಶಿ ಎಬಿಎನ್ ಜೋಸೆಫ್, ನಂಬೂದಿರಿ, ಸಮ್ಮಾನ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಬಾಬು ಜೋಸೆಫ್, ಟ್ರಸ್ಟ್‍ನ ಸದಸ್ಯರಾದ ವಾಸುದೇವನ್, ವ್ಯಂಗ್ಯಚಿತ್ರಕಾರ ಸುಧೀರನಾಥ್, ಬಿನುರಾಜ್ ಕಲಾಪೇತಂ ಉಪಸ್ಥಿತರಿದ್ದರು.

ಶತಮಾನೋತ್ಸವ ಆಚರಣೆಗಳು ಸೆಪ್ಟೆಂಬರ್ 13 ರಂದು ನಂಬೂದಿರಿ ಅವರ 100 ನೇ ಜನ್ಮದಿನದಂದು ಅವರ ಜನ್ಮಸ್ಥಳವಾದ ಕರುವತ್ಮಾನ, ನಡುವಟ್ಟಂ, ಪೆÇನ್ನಾನಿಯಲ್ಲಿ ಪ್ರಾರಂಭವಾಯಿತು. ಆರ್ಟಿಸ್ಟ್ ನಂಬೂದಿರಿ ಸಮ್ಮಾನ್ ಟ್ರಸ್ಟ್ ಮತ್ತು ಕೇರಳ ಲಲಿತಕಲಾ ಅಕಾಡೆಮಿ ಜಂಟಿಯಾಗಿ 'ಎತ್ರಯುಂ ಚಿತ್ರ ಚಿತ್ರ' ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ಆಯೋಜಿಸಿದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries