HEALTH TIPS

ಮಾಜಿ ಡಿಜಿಪಿ ಜಾಕೋಬ್ ಥಾಮಸ್ ಆರ್.ಎಸ್.ಎಸ್.ಗೆ ಸೇರ್ಪಡೆ; ಪೂರ್ಣ ಗಣವೇಶದಲ್ಲಿ ವಿಜಯದಶಮಿ ಉತ್ಸವದಲ್ಲಿ ಭಾಗಿಯಾಗಲಿರುವ ನಿವೃತ್ತ ಅಧಿಕಾರಿ

ಕೊಚ್ಚಿ: ಮಾಜಿ ಡಿಜಿಪಿ ಜಾಕೋಬ್ ಥಾಮಸ್ ಆರ್.ಎಸ್.ಎಸ್.ಗೆ ಸೇರ್ಪಡೆಗೊಂಡಿರುವರು. ವಿಜಯದಶಮಿ ದಿನದಂದು ನಡೆಯುವ ಪಥಸಂಚಲನದಲ್ಲಿ ಅವರು ಪೂರ್ಣ ಗಣವೇಶದಲ್ಲಿ ಭಾಗವಹಿಸಲಿದ್ದಾರೆ. ಸ್ವಯಂಸೇವಕ ಕರ್ತವ್ಯಕ್ಕೆ ಆರ್.ಎಸ್.ಎಸ್. ಅತ್ಯುತ್ತಮ ಸ್ಥಳ ಎಂದು ಜಾಕೋಬ್ ಥಾಮಸ್ ಸ್ಪಷ್ಟಪಡಿಸಿದ್ದಾರೆ.

ವಿಜಯದಶಮಿ ದಿನದಂದು ಎರ್ನಾಕುಳಂ ಜಿಲ್ಲೆಯ ಪಳ್ಳಿಕ್ಕರದಲ್ಲಿ ಪಥಸಂಚಲನವನ್ನು ಆಯೋಜಿಸಲಾಗಿದೆ. ವಿಜಯದಶಮಿಯನ್ನು ಆರ್.ಎಸ್.ಎಸ್.ನ ಸಂಸ್ಥಾಪನಾ ದಿನವೆಂದು ಪರಿಗಣಿಸಲಾದ ಅತಿದೊಡ್ಡ ಕಾರ್ಯಕ್ರಮವಾಗಿದೆ. ಗಣವೇಶದಲ್ಲಿ ಜಾಕೋಬ್ ಥಾಮಸ್ ಭಾಗವಹಿಸಲಿದ್ದಾರೆ. 


ಭಾರತೀಯ ಚಿಂತನೆಗೆ ಹತ್ತಿರದಲ್ಲಿರಲು ಆರ್.ಎಸ್.ಎಸ್.ನಲ್ಲಿ ಸಕ್ರಿಯರಾಗುತ್ತಿದ್ದೇನೆ ಎಂದು ಜಾಕೋಬ್ ಥಾಮಸ್ ಹೇಳಿದರು. ಸಂಘಕ್ಕೆ ಯಾವುದೇ ರಾಜಕೀಯವಿಲ್ಲ. ಇದು ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಸ್ಥೆಯಾಗಿದೆ. ಜನರ ಉನ್ನತಿಗಾಗಿ ಕೆಲಸ ಮಾಡುವ ಸಂಸ್ಥೆ. ತಾನು ಕೂಡ ಅದರ ಭಾಗವಾಗುತ್ತಿದ್ದೇನೆ ಎಂದು ಜಾಕೋಬ್ ಥಾಮಸ್ ಹೇಳಿದರು.

ಜಾಕೋಬ್ ಥಾಮಸ್ ಸುದೀರ್ಘಕಾಲದವರೆಗೆ ಆರ್‍ಎಸ್‍ಎಸ್ ಮತ್ತು ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಇರಿಂಞಲಕುಡದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಾಕೋಬ್ ಥಾಮಸ್ ಸ್ಪರ್ಧಿಸಿದ್ದರು. ಇದಕ್ಕೂ ಮೊದಲು ಅವರು ಆರ್‍ಎಸ್‍ಎಸ್ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. 

2019 ರಲ್ಲಿ ಆರ್‍ಎಸ್‍ಎಸ್ ಆಯೋಜಿಸಿದ್ದ ಗುರು ಪೂಜೆಯಲ್ಲಿ ಜಾಕೋಬ್ ಥಾಮಸ್ ಭಾಗವಹಿಸಿದ್ದರು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries